ಪತ್ತಿನ ಸಂಘದ ಅಧ್ಯಕ್ಷ- ಉಪಾಧ್ಯಕ್ಷರ ಅವಿರೋಧ ಆಯ್ಕೆ

ಶಿಗ್ಗಾವಿ 01 :  ತಾಲೂಕಿನ ಕುನ್ನೂರ ಗ್ರಾಮದ ವ್ಯವಸಾಯ ಸೇವಾ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಮಹಬೂಬುಸಾಬ ಹುಸನ್‍ಸಾಬ ಜಿಗಳೂರ ಹಾಗೂ ಉಪಾಧ್ಯಕ್ಷರಾಗಿ ಭೀಮಣ್ಣಾ ಪಕ್ಕಿರಪ್ಪ ಬಾರ್ಕಿ ಅವಿರೋಧವಾಗಿ ಆಯ್ಕೆಯಾದರು ಶಿಗ್ಗಾವಿ ಸಹಕಾರಿ ಅಭಿವೃದ್ದಿ ಅಧಿಕಾರಿಗಳು ಹಾಗೂ ಚುನಾವಣಾಧಿಕಾರಿ ಬಸವರಾಜ ಬಿ.ಹುಚ್ಚಮ್ಮನವರ ಘೋಷಣೆಯನ್ನು ಮಾಡಿದರು.

ಬುಧವಾರ ಜರುಗಿದ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಒಂದೊಂದು ನಾಮ ಪತ್ರವನ್ನು ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು ಎಂದು ಘೋಷಣೆಯನ್ನು ಮಾಡಿದರು. ಸದಸ್ಯರಾಗಿ ಭರಮಗೌಡ ಮಲ್ಲಿಕಾರ್ಜುನಗೌಡ ಪಾಟೀಲ, ಅಲ್ಲಿಸಾಬ ನ ಹಳ್ಯಾಳ, ಶಾಂತಪ್ಪ ಬ.ಸೋಗಲಿ, ಮಹದೇವಪ್ಪ. ವಿ. ಬೂದಿಹಾಳ, ಶಿದ್ದಪ್ಪ ಬ ಹದ್ಲಿ, ಬಸವ್ವ ನಿಂಗಯ್ಯ ಪೂಜಾರ, ಈರವ್ವ ಬ ಹಿರೇಮಠ, ಲಕ್ಷ್ಮಣ್ಣಾ ಫ ಕೇರಪ್ಪನವರ, ಮಮ್ಮದ ಹನೀಪ ಕೆ. ಮುಲ್ಲಾ, ಹನುಮಂತಪ್ಪ ಶಿವಪ್ಪ ಲಮಾಣಿ, ಅವಿರೋಧವಾಗಿ ಆಯ್ಕೆಯಾದರು.

ನೂತನ ಅಧ್ಯಕ್ಷ ಮಹಬೂಬುಸಾಬ ಹುಸನ್‍ಸಾಬ ಜಿಗಳೂರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ ಸಂಘದ ಅಭಿವೃದ್ದಿಗೆ ಎಲ್ಲ ಸದಸ್ಯರ ಹಾಗೂ ಗ್ರಾಮದವರ ಸಹಕಾರದೊಂದಿಗೆ ಅಭಿವೃದ್ದಿ ಪಡಿಸಲು ಮುಂದಾಗುತ್ತೇನೆ ಎಂದರು.

ಗ್ರಾಮ ಪಂಚಾಯತ ಸದಸ್ಯರಾದ ರಾಮಣ್ಣಾ ಇಂದೂರ, ಡಿ.ಬಿ.ಬೋಮ್ಮನಹಳ್ಳಿ, ಮಾಜಿ ಸದಸ್ಯ ಗಂಗಪ್ಪ ಹುಲ್ಲೂರ, ಚಂದ್ರು ನಾಯಕ್, ಸಂಘದ ಮಾಜಿ ಉಪಾಧ್ಯಕ್ಷ ಜೆ.ಡಿ.ಅಂಗಡಿ, ಮಹಾವೀರ ಕೋಳೂರ, ರಾಮು ಮತ್ತಿಗಟ್ಟಿ, ಸೇರಿದಂತೆ ಗ್ರಾಮದ ಮುಖಂಡರು ರೈತರು ಸೇರಿದಂತೆ ಹಲವರು ಇದ್ದರು.