ಶಿಕ್ಷಕ ಮಹಾದೇವ ಬೈರಾಮಡಗಿಗೆ ನಮನ ಕಾರ‌್ಯಕ್ರಮ

ಇಂಡಿ 18: ಮಹಾದೇವ ಬೈರಾಮಡಗಿ ಅವರು ಕೇವಲ ಶಿಕ್ಷಕರಾಗಿ ಸೇವೆ ಸಲ್ಲಿಸದೆ, ಇಡೀ ಮನುಕುಲದ ಬಗ್ಗೆ ಅತ್ಯಂತ ಕಾಳಜಿ ಸೇವಕರಾಗಿ ಕಾರ‌್ಯ ನಿರ್ವಹಿಸಿದ್ದಾರೆಂದು ತಳವಾರ ಪರಿವಾರ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಹುಚ್ಚಪ್ಪ ತಳವಾರ ಹೇಳಿದರು. 

ಭಾನುವಾರ ಪಟ್ಟಣದ ಎನ್‌ಎಸಿ ಸಹಕಾರಿ ಸಂಘದ ಸಭಾಭವನದಲ್ಲಿ ಶಿಕ್ಷಕ ಮಹಾದೇವ ಬೈರಾಮಡಗಿ ಅವರ ಹೃದಯ ಪೂರ್ವಕ ನಮನ ಕಾರ‌್ಯಕ್ರಮದಲ್ಲಿ ಅವರು ಮಾತನಾಡಿದರು. 

ಶಿಕ್ಷಕ ಮಹಾದೇವ ಬೈರಾಮಡಗಿ ಅವರ ಅಕಾಲಿಕ ನಿಧನದಿಂದ ಸಮುದಾಯ, ಸಮಾಜಕ್ಕೆ ದೊಡ್ಡ ಪ್ರಮಾಣದ ಹಾನಿಯಾಗಿದೆ. ಅವರು ಅತ್ಯಂತ ಸರಳ ಸಜ್ಜಿನಿಕೆ ನಿಸ್ವಾರ್ಥ ಸೇವೆ ಮಾಡುತ್ತಿದ್ದರು ಎಂದರು. 

ನ್ಯಾಯವಾದಿ ಎಸ್‌.ಬಿ. ಕೆಂಬೋಗಿ, ಪತ್ರಕರ್ತ ಶಂಕರಲಿಂಗ ಜಮಾದಾರ ಮಾತಾನಾಡಿದರು. 

ಈ ಸಂದರ್ಭದಲ್ಲಿ ಮಹಾಂತೇಶ ಬಡದಾಳ, ಮಲ್ಲಿಕಾರ್ಜುನ ಹೊರ್ತಿ, ಡಾ. ಸುರೇಶ ವಿಜಯಪುರ, ಜಟ್ಟಿಂಗರಾಯ ತಳವಾರ, ಸೋಮು ಜಮಾದಾರ, ಶಿಕ್ಷಕ ಬಿ.ಎನ್‌. ಜಮಾದಾರ, ಆರ್‌.ಜ. ಗಬ್ಬೂರ, ಆರ್‌.ಕೆ. ವಾಲಿಕಾರ, ಈರಣ್ಣ ಜಮಾದಾರ, ಸುರೇಶ್ ಡೊಂಗ್ರೊಜ, ರವಿ ರಾಯಜಿ, ಎಸ್‌.ಐ. ಕೋಳಿ, ಅರವಿಂದ ದೊಡಮನಿ, ವಿಶ್ವನಾಥ ಮಣಗಿರಿ, ಸುನೀಲ ವಾಲಿಕಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 

18 ಇಂಡಿ 3: 

ಇಂಡಿ: ಪಟ್ಟಣದ ಎನ್‌ಎಸಿ ಸಹಕಾರಿ ಸಂಘದ ಸಭಾಭವನದಲ್ಲಿ ಶಿಕ್ಷಕ ಮಹಾದೇವ ಬೈರಾಮಡಗಿ ಅವರ ಹೃದಯ ಪೂರ್ವಕ ನಮನ ಕಾರ‌್ಯಕ್ರಮದಲ್ಲಿ ಹುಚ್ಚಪ್ಪ ತಳವಾರ ಮಾತನಾಡಿದರು.