ತಂಬಾಕು ಸೇವನೆಯಿಂದ ಮಹಾಮಾರಿ ರೋಗ : ವೈ.ಎಂ.ಪೂಜಾರ
Tobacco consumption is a pandemic: Y.M. Pujar
ಇಂಡಿ 30 : ತಂಬಾಕು ಮೂಲ ಉತ್ಪನ್ನಗಳಾದ ಗುಟ್ಕಾ, ಪಾನಪರಾಗ, ಬಿಡಿ, ಸಿಗರೇಟು, ಸೇವನೆಯಿಂದ ಕ್ಯಾನ್ಸರ, ಲಕ್ವಾ, ಹಾರ್ಟ್ ಅಟ್ಯಾಕ್ಕೆದಂತಹ ಮಹಾಮಾರಿ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ.ಪೂಜಾರ ಹೇಳಿದರು.
ಅವರು ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ತಂಬಾಕು ಮುಕ್ತ ಗ್ರಾಮ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರದ ಆದೇಶದಂತೆ ಸಮಿತಿ ರಚಿಸಿ. ಈಗಾಗಲೇ ತಾಲೂಕಿನ ಜನಸಂಖ್ಯೆಯಲ್ಲಿ 2,000 ಕ್ಕಿಂತ ಕಡಿಮೆ ಇರುವ ಆಯ್ದ ಗ್ರಾಮಗಳು ಆಯ್ಕೆ ಮಾಡಿಕೊಂಡು ಅದರಲ್ಲಿ ಹಂಚಿನಾಳ ಗ್ರಾಮ ಆಯ್ದುಕೋಳ್ಳಲಾಗಿದೆ. ಈ ಗ್ರಾಮದಲ್ಲಿ ಸಮಿತಿ ನಿರ್ಮಿಸಿದ ಉದ್ದೇಶವೆಂದರೆ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬಿರುವದಲ್ಲದೇ ಎಷ್ಟೋ ಕುಟುಂಬಗಳು ನಾಶವಾಗಿದ್ದರಿಂದ ಇವುಗಳನ್ನು ಇಂದಿನಿಂದಲೇ ನಿರ್ಮೂಲನೆ ಆಗಬೇಕಾಗಿದೆ ಎಂದರು. ಕಾರ್ಯಕ್ರಮದ ನಂತರ ಗ್ರಾಮದಲ್ಲಿರುವ 2 ಅಂಗಡಿಯ ಮಾಲೀಕರು ಹಾಗೂ ಮಕ್ಕಳ ಸಿಹಿ ತಿಂಡಿ ಮಾರುತ್ತಿದ್ದ ಅಂಗಡಿ ಮಾಲೀಕರಿಗೂ ಮನವರಿಕೆ ಮಾಡಿ ಅವರಿಂದಲೇ ತಂಬಾಕು ಮುಕ್ತ ಗ್ರಾಮಕ್ಕಾಗಿ ಪ್ರತಿಜ್ಞೆ ಮಾಡಿಸಿ ಅಲ್ಲಿಯೇ ಇದ್ದ ಶಾಲಾ ಮಕ್ಕಳಿಂದ ಗುಲಾಬಿ ಹೂ ಕೊಡಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರಾದ ವಿದ್ಯಾಧರ ಮಂಗಳೂರೆ, ಹೂವಣ್ಣ ಚೌಡಿಯಾಳ, ಅಂಗಡಿಯ ಮಾಲೀಕರುಗಳಾದ ಸದ್ದಾಮ ರೇವುರ, ಚಾಂದಸಾಬ, ಅರವಿಂದ ತಳವಾರ, ಬಾಬು ಹೊಸಮನಿ, ಮುಖ್ಯ ಗುರುಗಳಾದ ಭೀಮರಾಯ ಜಮಖಂಡಿ, ಸಮುದಾಯ ಆರೋಗ್ಯಾಧಿಕಾರಿ ಸದ್ದಾಂ ಹುಸೇನ ನಾಗುರ, ಆರೋಗ್ಯನಿರಕ್ಷಣಾಧಿಕಾರಿ ದೇವೇಂದ್ರ್ಪ ಪತ್ತಾರ, ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀದೇವಿ ಕೂಟನೂರ, ರಾಧಿಕಾ ವಾಲಿಕರ, ಆಶಾ ಕಾರ್ಯಕರ್ತೆ ಅನ್ನಪೂರ್ಣ ತೊನಿಶಾಳ ಸೇರಿದಂತೆ ಗ್ರಾಮಸ್ಥರು, ಶಾಲಾ ಮಕ್ಕಳು ಉಪಸ್ಥಿತರಿದ್ದರು. ದೇವೇಂದ್ರ್ಪ ಪತ್ತಾರ ಸ್ವಾಗತಿಸಿದರು, ಸದ್ದಾಮ ಮಹುಸೇನ ನಿರೂಪಿಸಿದರು, ಭೀಮರಾಯ ಜಮಖಂಡಿ ವಂದಿಸಿದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 