ಒಗ್ಗಟ್ಟಿನಲ್ಲಿ ಬಲವಿದೆ: ವಿಜಯ ಮಹಾಂತ ಸ್ವಾಮಿಗಳು

ಯಲಬುರ್ಗಾ 27: ಧರ್ಮ ಜಾತಿ ಮರೆತು ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸುವದರಿಂದ ಎಲ್ಲಾ ಕೆಲಸಗಳು ಯಶಸ್ವಿ ಆಗುತ್ತವೆ ಎಂದು ವಿಜಯ ಮಹಾಂತ ಸ್ವಾಮಿಗಳು ಹೇಳಿದರು.  

ತಾಲೂಕಿನ ಕರಮುಡಿ ಗ್ರಾಮದ ಕರವೀರಭದ್ರೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ ವೀರಭದ್ರೇಶ್ವರ ಪುರಾಣ ಮಂಗಲ, ಮುತೈದೆಯರಿಗೆ ಉಡಿತುಂಬುವ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು ಗ್ರಾಮದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮವು ಭಾವೈಕ್ಯತೆಯ ಸಂಕೇತವಾಗಿದೆ ಎಂದರು. ಕರಮುಡಿ ಗ್ರಾಮದಲ್ಲಿ ಭಾವೈಕ್ಯತೆ ಇದೆ. ಜಾತಿ ಬೇಧಗಳನ್ನು ಎಣಿಸದೆ ಸಾಮರಸ್ಯದ ಬದುಕು ಸಾಗಿಸುವ ಮನಸ್ಸುಗಳು ಇಲ್ಲಿ ಅಪಾರವಾಗಿವೆ ಎಂದರು. ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಮಾಡುತ್ತಿರುವ ಕೆಲಸವೇ ಒಗ್ಗಟ್ಟಿನ ಸಾರವಾಗಿದೆ ಎಂದರು.  

ಗಜಗಿನಹಾಳದ ವೀರೇಶ ಶಾಸ್ತ್ರಿಗಳು ವೀರಭದ್ರೇಶ್ವರ ಪುರಾಣವನ್ನು ಮಂಗಲಮಾಡಿ ಮತ್ತೇ ಪ್ರಾರಂಭಿಸಿದರು. ಯರಗೇರಾದ ಚಂದಾಲಿಂಗಯ್ಯ ಹಿರೇಮಠ, ವೀರಭದ್ರಯ್ಯ ಕೆಂಬಾವಿಮಠ ರವರು ಸಂಗೀತ ಕಾರ್ಯಕ್ರಮ ನೀಡಿದರು.  

ಯಲಬುರ್ಗಾದ ಬಸವಲಿಂಗೇಶ್ವರ ಸ್ವಾಮಿಗಳು, ನಿಡಗುಂದಿಕೊಪ್ಪದ ಚನ್ನಬಸವಸ್ವಾಮಿಗಳು, ಕ.ರಾ.ಬಿ.ನಿ.ನಿ.ದ ನಿರ್ಧೇಶಕರಾದ ಶಿವಬಸಪ್ಪ ಬೆಲ್ಲದ, ಗ್ರಾ.ಪಂ.ಉಪಾಧ್ಯಕ್ಷೆ ಲಕ್ಷ್ಮವ್ವ ಪ.ಲಮಾಣಿ, ರಾಜಶೇಖರ ನಿಂಗೋಜಿ,  ವಿ.ಬಿ.ನಿಡಶೇಸಿ, ಅರವಿಂದಗೌಡ ಪಾಟೀಲ, ಶ್ಯಾಮಿದಸಾಬ್ ಮುಲ್ಲಾ, ಶಿವಪುತ್ರ​‍್ಪ ಮಲಿಗೋಡದ, ಶರಣಪ್ಫ ಕೆಂಚರಡ್ದಿ, ಭೀಮಪ್ಪ ಬಂಡಿ, ಬಸವರಾಜ ಉಳ್ಳಿಗಡ್ದಿ, ರಾಮಣ್ಣ ಪ್ರಭಣ್ಣನವರ, ಗೌಡಪ್ಪ ಬಲಕುಂದಿ, ಹನುಮಂತ ಕಾಳಿ, ಮುಂಜುನಾಥ ಕುಕನೂರ, ಕೆ.ಎಸ್‌.ಕುರಿ, ಬಸವರಾಜ ಬಲಕುಂದಿ, ಕಾಶಯ್ಯ ನಂದಿಕೊಲ, ಗುರ​‍್ಪ ಅಂಗಡಿ ರಾಜು ಉಳ್ಳಾಗಡ್ಡಿ, ಸ.ಶರಣಪ್ಪ ಪಾಟೀಲ, ಮೈಲಾರ​‍್ಪ ಪಲ್ಲೇದ, ಲಕ್ಷ್ಮವ್ವ ಕರೆಕ್ಕಿ, ರಾಮಣ್ಣ ಹೊಕ್ಕಳದ, ಶಕುಂತಲಾ ಪಾಟೀಲ, ಶರಣಗೌಡ ಪೋ.ಪಾಟೀಲ, ಮಂಜುನಾಥ ಕುಕನೂರ, ಚನ್ನಬಸಪ್ಪ ಗೊಂಗಡಶೆಟ್ಟಿ, ಉಮೇಶ ಕುಕನೂರ, ಮರ್ಧಾನಸಾಬ ಮುಲ್ಲಾ, ಪರುಶರಾಮ ರಾಠೊಡ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.  

ಜಿ.ಎಂ.ನಿಂಗೋಜಿ, ಎಸ್‌.ಎಸ್‌.ಅರಳಿ,  ಶಿವರಾಜ ಪಾಟೀಲ, ಎಂ.ಡಿ.ಪಾಟೀಲ, ಕಳಕಪ್ಪ ಕಂಬಳಿ, ಹುಚ್ಚಿರ​‍್ಪ ರಾಂಪೂರ ಮಾತನಾಡಿದರು. ಗ್ರಾ.ಪಂ.ಅಧ್ಯಕ್ಷ ಕಲ್ಲಿನಾಥ ಲಿಂಗಣ್ಣವರ ಅಧ್ಯಕ್ಷತೆ ವಹಿಸಿದ್ದರು. ಗಂಗಪ್ಪ ಹವಳಿ, ಭೀಮಪ್ಪ ಹವಳಿ, ವೀರುಪಾಕ್ಷಪ್ಪ ಉಳ್ಳಾಗಡ್ದಿ , ವೀರಮ್ಮ ನಿಡಶೇಸಿ, ಜ್ಯೋತಿ ಉಳ್ಳಾಗಡ್ದಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.