ಯುವ ಪೀಳಿಗೆ ರಂಗಭೂಮಿ ಬಗ್ಗೆ ಆಸಕ್ತಿ ಬೆಳೆಸಬೇಕು: ಎಂ.ಬಿ.ಬಸವರಾಜ
The younger generation should develop an interest in theater: M.B. Basavaraj
ಹೂವಿನಹಡಗಲಿ 23: ರಂಗಭೂಮಿ ಕ್ಷೇತ್ರ ಉಳಿಸಿ ಬೆಳೆಸಲು ನಿರಂತರ ಚಟುವಟಿಕೆ ನಡೆಯಬೇಕು. ಯುವ ಪೀಳಿಗೆ ರಂಗಭೂಮಿ ಕ್ಷೇತ್ರದ ಬಗ್ಗೆ ಆಸಕ್ತಿ ಬೆಳಸಬೇಕು ರೈತ ಮುಖಂಡರಾದ ಎಂ.ಬಿ.ಬಸವರಾಜ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಸೋಗಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವೀರೇಶ್ವರ ಸಾಂಸ್ಕೃತಿಕ ದೊಡ್ಡಾಟ ಸಂಘದ ಸಹಯೋಗದಿಂದ ನೋಂದಾಯಿತ ಸಂಘ ಸಂಸ್ಥೆಗಳ ಧನ ಸಹಾಯ ಯೋಜನೆಯಡಿ ಹಮ್ಮಿಕೊಂಡಿದ್ದ ಜಾನಪದ ರಂಗ ಸಂಭ್ರಮದಲ್ಲಿ ಮಾತನಾಡಿದರು.ಟಿವಿ ಧಾರವಾಯಿಗಳ ಭರಾಟೆಯಿಂದಾಗಿ ರಂಗಭೂಮಿಗೆ ಹಿನ್ನಡೆಯಾಗಿದೆ. ಪ್ರತಿಯೊಬ್ಬರೂ ರಂಗಭೂಮಿ, ಕಲೆ, ಸಾಹಿತ್ಯ, ಸಂಗೀತವನ್ನು ಉಳಿಸಿ ಬೆಳಸಬೇಕು ಎಂದರು.ಎ.ಎಂ. ಹಾಲಯ್ಯ ಶಾಸ್ತ್ರಿ ಮಾತನಾಡಿ, "ರಂಗಭೂಮಿಗೆ ಕಲಾವಿದರ ಕೊರತೆಯಾಗಿದ್ದು ಬಗ್ಗೆ ಆತಂಕ ವ್ಯಕ್ತಪಡಿಸಿದರು.ಅಧುನಿಕ ಸ್ಪರ್ಶ ಮೂಡಿದಾಗ ಕಲಾವಿದರು ವಿಮುಖರಾಗುತ್ತಿದ್ದಾರೆ. ಸರಕಾರ, ಸಂಘ ಸಂಸ್ಥೆಗಳಿಂದ ಕಲೆಗೆ ಪ್ರೋತ್ಸಾಹದ ಅಗತ್ಯವಿದೆ. ’"ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೈ.ಮಲ್ಲಪ್ಪ ಗವಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾವಿದರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ಸಿದ್ದಲಿಂಗೇಶ, ರಂಗಣ್ಣ ಅವರನ್ನು ಸ್ಮರಿಸಿದರು.
ದೂಪದ ಕೊಟ್ರ್ಪ, ಎಸಿಎಂಸಿ ಅಧ್ಯಕ್ಷ ಹಗರನೂರು ಸಿದ್ಧಪ್ಪ ಡಾ.ಎಸ್.ಕರಿಬಸಪ್ಪ ಸಂಗಬ್ಬಾಲಾ ಬಯಲಾಟ ಭಾಗವತರಾದ ಗಚ್ಚಿನಮನಿ ಕೊಟ್ಟಪ್ಪ ಕೋಗಳಿ ಕುಬೇರ್ಪ, ಡಿ.ಹೊನ್ನೇಶ್, ಎಚ್.ಕಣ್ಣೀಶ್, ಸಿ.ನಾಗಭೂಷಣ, ಹಾರ್ಮೋನಿಯಂ ಕಸ್ತೂರ್ಪ, ಮದ್ದಳ ವಾದಕ ಕರಿಬಸಪ್ಪ ಕಾಂತೇಶ ಇತರರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 