ಸಂಬರಗಿ: ಕೆರೆಯ ಹುಳ ಎತ್ತುವ ಕಾಮಗಾರಿ ಪ್ರಾರಂಭ
ಲೋಕದರ್ಶನ ವರದಿ
ಸಂಬರಗಿ 13: ತಾಂವಶಿ ಕಲ್ಲೂತಿ ರಸ್ತೆಯ ಬದಿಗೆ ಇರುವ ಕೆರೆಯ ಹುಳ ತುಂಬುವ ಉದ್ಯೋಗ ಖಾತ್ರಿ ಯೊಜನೆಯ ಕಾಮಗಾರಿ ಪ್ರಾರಂಭವಿದ್ದು ಸುಮಾರು 20 ಜನ ಕೆಲಸ ನಿರ್ವಹಿಸುತ್ತಿದ್ದಾರೆ ಕೆರೆ ಹುಳ ಎತ್ತುವದರಿಂದ ಮಳೆಗಾಲದಲ್ಲಿ ನೀರು ಸಂಗ್ರಹವಾಗಿ ರೈತರಿಗೆ ಅನುಕೂಲವಾಗುತ್ತದೆ.
ಬರಗಾಲಕ್ಕೆ ತುತ್ತಾಗಿ ಬಳಲುತ್ತಿರುವ ಗಡಿ ಭಾಗದ 33 ಗ್ರಾಮದಲ್ಲಿ ಕೂಲಿಗಾರರು ಮಹಾರಾಷ್ಟ್ರಕ್ಕೆ ಗೂಳೆ ಹೊಗುತ್ತಿದ್ದಾರೆ. ತಾಲೂಕಾ ಪಂಚಾಯತ ಕಾರ್ಯ ನಿವರ್ಾಹಕ ಅಧಿಕಾರಿಗಳು ರವಿ ಬಂಗಾರೇಪ್ಪಣ್ಣವರ ಪ್ರತಿ ಗ್ರಾಮಕ್ಕೆ ಭೆಟ್ಟಿ ನೀಡಿ ಗ್ರಾಮ ಪಂಚಾಯತ ವತಿಯಿಂದ ಕೂಲಿಗಾರರ ಸವರ್ೇ ಮಾಡಿ ಪ್ರತಿಯೊಬ್ಬ ಕೂಲಿಗಾರರಿಗೆ ಜೋಬ್ ಕಾರ್ಡ ತಯಾರಿಸಿ ಪ್ರತಿ ಗ್ರಾಮಗಲ್ಲಿ ಕೂಲಿಗಾರಿಗೆ ಕೆಲಸ ನೀಡಿ ಗೂಳೆ ಹೋಗುವುದನ್ನು ತಡೆಗಟ್ಟಿಸಿದರು. ಈ ಭಾಗದ ಗ್ರಾಮದಲ್ಲಿ ಎಲ್ಲಾ ಜನರಿಗೆ ಕೆಲಸ ನೀಡಿದ್ದಾರೆ ಅಗ್ರಾಣಿ ನದಿ ಸ್ವಚ್ಛತ್ತಾ ಕಾಮಗಾರಿ, ಬಾಂದಾರ ಹುಳ ಎತ್ತುವುದು, ಕೆರೆ ಹುಳ ಎತ್ತುವುದು ಕಾಮಗಾರಿ ಕೈಗೊಂಡು ರೈತರಿಗೆ ಅನುಕೂಲ ಮಾಡಿದ್ದಾರೆ. ತಾಂವಶಿ ಗ್ರಾಮದ ಉದ್ಯೋಗ ಖಾತ್ರಿ ಕಾಮಗಾರಿಗೆ ಅಥಣಿ ಪುರಸಭೆ ಅಧ್ಯಕ್ಷ ರಾವಸಾಬ ಐಹೊಳೆ, ಸಂಬರಗಿ ಗ್ರಾಮ ಪಂಚಾಯತ ಉಪಾಧ್ಯಕ್ಷೆ ಬಂಗಾರೆವ್ವ ಐಹೊಳೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಮಾಡಿದರು. ಈ ವೇಳೆ ರಾಜೇಶ ಕುಂಬಾರ, ಆನಂದಾ ಕೋಳಿ, ಪಾಂಡುರಂಗ ಕಾಂಬಳೆ, ಸೇರಿದ ಅನೇಕ ಗಣ್ಯರು ಹಾಜರಿದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 