ಜ್ಯೋತಿಬಾ, ಸಾವಿತ್ರಿಬಾಯಿ ಫುಲೆ ಟ್ರಸ್ಟ್ನ ಕಾರ್ಯ ಶ್ಲಾಘನೀಯ: ಶ್ರೀಕಾಂತ ಮಾಳಿ
The work of Jyotiba, Savitribai Phule Trust is commendable: Srikanth Mali
ಜ್ಯೋತಿಬಾ, ಸಾವಿತ್ರಿಬಾಯಿ ಫುಲೆ ಟ್ರಸ್ಟ್ನ ಕಾರ್ಯ ಶ್ಲಾಘನೀಯ: ಶ್ರೀಕಾಂತ ಮಾಳಿ
ಮಹಾಲಿಂಗಪುರ 24: ಶ್ರದ್ಧೆ, ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಈ ಸಂಸ್ಥೆ ತಲೆಯೆತ್ತಿ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಅಮೋಘ ಸೇವೆ ಸಲ್ಲಿಸಲಿ. ಕನ್ನಡ ನಾಡಿನಲ್ಲಿ ಇನ್ನಷ್ಟು ಅತ್ಯುತ್ತಮ ಹೆಸರು, ಕೀರ್ತಿ ಸಂಪಾದಿಸಲಿ. ಕರ್ನಾಟಕದ ಮಾಳಿ ಸಮಾಜದಲ್ಲಿ ತನ್ನನ್ನು ತಾನು ಗುರುತಿಸಿಕೊಂಡ ಸತ್ಕಾರ್ಯ ಅಮೋಘವಾದದು. ಜೊತೆಗೆ ಈ ಟ್ರಸ್ಟ್ನ ಕಾರ್ಯ ಶ್ಲಾಘನೀಯವಾದುದು ಎಂದು ಜ್ಯೋತಿಬಾ, ಸಾವಿತ್ರಿಬಾಯಿ ಫುಲೆ ಟ್ರಸ್ಟ್ನ ನೂತನ ಗೌರವಾಧ್ಯಕ್ಷ ಶ್ರೀಕಾಂತ ಎಸ್ ಮಾಳಿ ಹೇಳಿದರು. ಪಟ್ಟಣದ ಮಹಾತ್ಮ ಜ್ಯೋತಿಬಾ ಫುಲೆ ಸಮುದಾಯ ಭವನದಲ್ಲಿ ನಡೆದ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ನೂತನ ಗೌರವಾಧ್ಯಕ್ಷ ಸ್ಥಾನ ಪಡೆದು ಮಾತನಾಡಿದರು. ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಮಹಾಲಿಂಗ ಮಾಳಿ ಸಭೆಯನ್ನು ಉದ್ದೇಶಿಸಿ ಪ್ರಾಸ್ತಾವಿಕ ಮಾತನಾಡಿದರು. ನೂತನ ಗೌರವಾಧ್ಯಕ್ಷರಾಗಿ ಶ್ರೀಕಾಂತ ಎಸ್.ಮಾಳಿ, ಅಧ್ಯಕ್ಷರಾಗಿ ಶಿವಲಿಂಗ ಮಾಳಿ, ಉಪಾಧ್ಯಕ್ಷರಾಗಿ ಚಿದಾನಂದ ಬಾಳಿಕಾಯಿ ಆಯ್ಕೆಯಾದರು. ಹಿರಿಯರಾದ ರುದ್ರ್ಪ ರಾಮದುರ್ಗ, ಈರ್ಪ ಮಾಳಿ, ಚನ್ನಪ್ಪ ಮಾಳಿ, ಶ್ರೀಕಾಂತ ಗು.ಮಾಳಿ, ಶಿವಪ್ಪ ಕವಣಿ, ಮಹಾಲಿಂಗ ಬಾಳಿಕಾಯಿ, ಬಸವರಾಜ ಬಾಳಿಕಾಯಿ, ಕಾಳಪ್ಪ ಮಾಳಿ, ಶ್ರೀಶೈಲ ಮಾಳಿ, ವಿಠ್ಠಲ ಮಾಳಿ, ಮಾರುತಿ ನಾಗನ್ನವರ, ಪರಶುರಾಮ ಮಾಳಿ ಉಪಸ್ಥಿತರಿದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 