ನೇಹಾ ಹಿರೇಮಠ ಹತ್ಯೆ ನಡೆದಿದ್ದು ಖಂಡನೀಯ: ವರುಣಗೌಡ

ಶಿಗ್ಗಾವಿ 19: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾದ ನಿರಂಜನ ಹಿರೇಮಠ ಅವರ ಪುತ್ರಿ ಎಂ.ಸಿ.ಎ ವ್ಯಾಸಾಂಗ ಮಾಡುತ್ತಿರುವ ನೇಹಾ ಹಿರೇಮಠ ಅವರ ಹತ್ಯೆ ನಡೆದಿದ್ದು ಅತ್ಯಂತ ಖಂಡನೀಯ ಎಂದು  ಕರ್ನಾಟಕ ರೈತ ಸೇನಾ ಹಾವೇರಿ ಜಿಲ್ಲಾಧ್ಯಕ್ಷ ವರುಣಗೌಡ ಎಂ ಪಾಟೀಲ ಹೇಳಿದ್ದಾರೆ. 

ವರದಿಗಾರರೊಂದಿಗೆ ಮಾತನಾಡಿದ ಅವರು ಇದೊಂದು ಅತ್ಯಂತ ಹೇಯ ಕೃತ್ಯವಾಗಿದ್ದು, ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು ಅಲ್ಲದೇ ಅಪರಾಧಿಗೆ ಕಾನೂನು ಕ್ರಮದ ಮೂಲಕ ನಿರ್ಧಾಕ್ಷಿಣ್ಯ ಕ್ರಮಗಳನ್ನು ಕೈಗೊಂಡು ಜೀವಾವಧಿ ಶಿಕ್ಷೆಯನ್ನು ನೀಡಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ಸರಕಾರದ ಗಮನಕ್ಕೆ ತಂದರು.