ಮೊಟ್ಟೆ ಒಡೆದಿರುವ ಘಟನೆ ಖಂಡನಿಯ

ತಾಂಬಾ: ಮಾಜಿ ಮುಖ್ಯಂತ್ರಿ, ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯನವರ ಕಾರಿನ ಮೇಲೆ ಮೋಟ್ಟೆ ಒಡೆದಿರುವ ಘಟನೆ ಖಂಡನಿಯವಾಗಿದ್ದು ಪ್ರಜಾ ಪ್ರಭುತ್ವ ವ್ಯವಸ್ತೆಗೆ ವಿರೋದ್ದವಾಗಿದೆ ಎಂದು ಜಿಲ್ಲಾ ಕಾಂಗ್ರೇಸ್ ಕಾರ್ಯದರ್ಶಿಯಾದ ಕಾಮೇಶ ಉಕ್ಕಲಿ ತಿಳಿಸಿದ್ದಾರೆ.  

  ನಮ್ಮ ನಾಯಕರಾದ ಸಿದ್ದರಾಮಯ್ಯನವರು ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿರುವಾಗ ವಿರೋದ ವ್ಯಕ್ತಪಡಿಸಿರುವದು ಆಕ್ಷೇಪಾರ್ಹವಾಗಿದೆ ಸಾಂವಿಧಾನಿಕವಾಗ ಯಾರುಬೇಕಾದರು ಪ್ರತಿಭಟನೆ ಮಾಡಬಹುದು ಆದರೆ ವೈಯಕ್ತಿಕವಾಗಿ ಮೋಟ್ಟೆ ಎಸೆಯುವದು, ಏಕವಚನದಲ್ಲಿ ಕುಗಾಡುವದು, ರಸ್ತೆ ಅಡಚನೆ ಮಾಡುವದು ಸರಿಯಾದ ಕ್ರಮವಲ್ಲ ವಿರೋದಮಾಡುವದಾದರೆ ಶಾಂತಿಯುತವಾಗಿ ಪ್ರತಿಭಟನೆ ಮಾಡಲಿ ಈ ರೀತಿ ಪುಂಡಾಟಿಕೆ ಮಾಡಿದವರನ್ನು ಒದ್ದು ಒಳಗೆಹಾಕಬೇಕು ಬಿಜೆಪಿಯವರಿಗೆ ಸೋಲಿನ ಬೀತ್ತಿಕಾಡುತ್ತಿದೆ ಅದಕ್ಕಾಗಿ ಹತಾಶಯ ಮನೋಭಾವದಿಂದ ಕಾಂಗ್ರೇಸ್ ನಾಯಕರನ್ನು ಹಿಯಾಳಿಸುವದು ಅನಗತ್ಯ ರೀತಿಯಲ್ಲಿ ಪ್ರತಿಭಟಿಸುವದು ಸುಕ್ತಕ್ರಮವಲ್ಲ ಅದಕ್ಕಾಗಿ ರಾಜಕಿಯ ನಾಯಕರನ್ನು ಗೌರವಿಸುವದನ್ನು ತಿಳಿದುಕೊಳ್ಳಬೇಕೆಂದು ಕಾಂಗ್ರೇಸ್ ಮುಖಂಡರಾದ ಮಹಿಬುಬ್ ಸುತ್ತಾರ, ಪೈಗಂಬರ್ ಹಚ್ಚಯಾಳ, ಆರ್‌.ಎಮ್‌.ನಾಟೀಕಾರ, ಪೂಜಪ್ಪ ಸಿಂದಗಿ, ಪರಸುಗೌಡ ಪಾಟೀಲ ಸೇರಿದಂತೆ ಕಾಂಗ್ರೇಸ್ ಮುಖಂಡರು ಎಚ್ಚರಿಕೆ ನೀಡಿದ್ದಾರೆ.