ದೇಶದ ಸಂವಿಧಾನ ಅತ್ಯಂತ ಸುಭದ್ರವಾಗಿದೆ: ಹುಲ್ಲೂರು
ಲೋಕದರ್ಶನವರದಿ
ರಾಣೇಬೆನ್ನೂರು: ದೇಶದ ಸಂವಿಧಾನವು ಅತ್ಯಂತ ಸುಭದ್ರವಾಗಿದೆ. ಭಾರತದ ಸಂವಿಧಾನದಂತೆ ಇತರೆ ಯಾವುದೇ ರಾಷ್ಟ್ರಗಳಲ್ಲಿ ಬಲಿಷ್ಠವಾಗಿರುವುದನ್ನು ಕಾಣಲು ಸಾಧ್ಯವಾಗಲಾರದು ಎಂದು ಕೆ.ಎಲ್.ಇ ಶಿಕ್ಷಣ ಸಂಸ್ಥೆಯ ರಾಜ-ರಾಜೇಶ್ವರಿ ಉಪನ್ಯಾಸಕಿ ಸುಜಾತಾ ಹುಲ್ಲೂರ ಹೇಳಿದರು.
ಅವರು ಮಂಗಳವಾರ ಕಾಲೇಜು ಭವನದಲ್ಲಿ ಆಯೋಜಿಸಿದ್ದ, ಭಾರತದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಸಾಮಾಜಿಕ, ರಾಜಕೀಯ, ಆಥರ್ಿಕ ಸಮಾನತೆ ಭಾರತದ ಪ್ರಮುಖ ಅಂಶಗಳಾಗಿವೆ ಎಂದು ವಿವರಿಸಿ ಮಾತನಾಡಿದ ಹುಲ್ಲೂರ ಅವರು ಪ್ರಜಾಪ್ರಭುತ್ವದಲ್ಲಿ ಹಕ್ಕು ಪಡೆಯುವುದು ಎಷ್ಟು ಮುಖ್ಯವೋ ಅಷ್ಠೇ ಮುಖ್ಯ ತಾವು ಸಹ ಹಕ್ಕನ್ನು ಹೇಗೆ ಚಲಾಯಿಸಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಕಾಲೇಜು ಪ್ರಾಚಾರ್ಯ ಎಂ.ವಿ. ಯಲಿಗಾರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎನ್.ಎಸ್.ಎಸ್. ಅಧಿಕಾರಿ ಎಸ್.ಬಿ. ಗುಜರ್ೇರ ಭೂಗೋಳ ಶಾಸ್ರ್ತ ಮುಖ್ಯಸ್ಥ ಎಂ.ಎನ್. ಸೂರಣಗಿ, ಹಿರಿಯ ಉಪನ್ಯಾಸಕಿ ಅನುರಾಧ ಎಸ್.,ನಿರ್ಮಲಾ ಬಡಗೇರ, ಉಪನ್ಯಾಸಕ ಎಸ್.ಎಲ್. ಕರ್ಲವಾಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 