ಕನಕದಾಸ ಜಯಂತ್ಯೋತ್ಸವ ಆಚರಣೆ
ಲೋಕದರ್ಶನ ವರದಿ
ಯರಗಟ್ಟಿ : ಇಲ್ಲಿನ ಶ್ರೀ ಭಕ್ತ ಕನಕದಾಸ ಜಯಂತೋತ್ಸವ ಸಮೀತಿ ಸದಸ್ಯರು 532 ನೇ ಶ್ರೀ ಭಕ್ತ ಕನಕದಾಸ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಿದರು. ಶ್ರೀ ಬೀರಸಿದ್ದಲಿಂಗೇಶ್ವರ ದೇವಸ್ಥಾನದಿಂದ ಎತ್ತಿನ ಚಕ್ಕಡಿ ಮೇಲೆ ಶ್ರೀ ಭಕ್ತ ಕನಕದಾಸ ಹಾಗೂ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಭಾವಚಿತ್ರದೊಂದಿಗೆ ಮಹಿಳೆಯರ ಆರುತಿ, ಕರಡಿ ಮಜಲು, ಶಿವಭಜನೆ ಹೀಗೆ ವಿವಿಧ ವಾಧ್ಯ ಮೇಳಗಳೊಂದಿಗೆ ಹೊರಟ ಮೆರವಣಿಗೆ ಒಂಟಿ ಗಲ್ಲಿ, ಕರಿಗೊಣ್ಣವರ ಓಣಿ, ಅಗಸಿ ಓಣಿ, ಮಿಕಲಿ ಓಣಿ, ಮಹಾಂತೇಶ ನಗರ, ಸಂಗೋಳ್ಳಿ ರಾಯಣ್ಣ ವೃತ್ತ, ಎಮ್.ಜಿ.ರಸ್ತೆ ಮೂಲಕ ಸಂಚರಿಸಿತು. ನಂತರ ಮಹಾಪ್ರಸಾದ ಜರುಗಿತು. ರಾತ್ರಿ ರಾಮದುರ್ಗ ತಾಲೂಕ ಹನಮಸಾಗರ ಶ್ರೀ ವಿಠ್ಠಲ ದೇವರ ಗಾಯನ ಸಂಘ ಕಲಾವಿದೆ ಕಮಲಾಕ್ಷಿ ತಂಡ ಹಾಗೂ ಗೋಕಾಕ ತಾಲೂಕಿನ ರಾಜಾಪೂರ ಶ್ರೀ ಚೂನ್ನಮ್ಮದೇವಿ ಗಾಯನ ಸಂಘದ ಮಾಲಾಶ್ರೀ ತಂಡದಿಂದ ಹರದೇಶಿ ನಾಗೇಶಿ ಎಂಬ ಡೋಳ್ಳಿನ ಪದಗಳ ಕಾರ್ಯಕ್ರಮ ಜರುಗಿತು.
ಈ ಸಂಧರ್ಭದಲ್ಲಿ ಶಿವಾನಂದ ಕರಿಗೊಣ್ಣವರ, ಹನಮಂತ ಗೋರಾಬಾಳ, ಮುದಕಪ್ಪ ತಡಸಲೂರ, ಲಗಮಪ್ಪ ಖಿಲಾರಿ, ಶ್ರೀಕಾಂತ ಖಿಲಾರಿ, ಹನಮಂತ ಹಾರೂಗೊಪ್ಪ, ಬಸು ದಿಡಗಣ್ಣವರ, ಮಡ್ಡೆಪ್ಪ ಕರಿಗಾರ, ಈರಣ್ಣ ಖಿಲಾರಿ, ಬೀರಪ್ಪ ಬೆಳವಲ, ಬೀರಪ್ಪ ತಡಸಲೂರ, ಬೀರಪ್ಪ ಕರಿಗೊಣ್ಣವರ, ಗೋಪಾಲ ಖಿಲಾರಿ, ಪಡೆಪ್ಪ ಅಡಕಲಗುಂಡಿ ಮುಂತಾದವರಿದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 