ಆಳಂದಿಗೆ ರವಾನೆಯಾದ ಅಂಕಲಿಯ ಸರ್ಕಾರ್ ಕುಟುಂಬದ ಮಾನದ ಕುದುರೆ
The Sarkar family's prized horse, which was sent to the slave
ಲೋಕದರ್ಶನ ವರದಿ
ಮಾಂಜರಿ 27 : ಸಮೀಪದ ಅಂಕಲಿ ಗ್ರಾಮದ ಅಂಕಲಿಕರ ಕಿತೋಳೆ ಸರಕಾರ ಕುಟುಂಬದವರ ಮಾನದ ಕುದುರೆಯು ದಿನಾಂಕ ಜುಲೈ 25 ರಂದು ಜರುಗಲಿರುವ ಪಂಡರಪೂರದ ಆಷಾಢ ಏಕಾದಶಿ ಅಂಗವಾಗಿ ಅಂಕಲಿಯಿಂದ ಮಹಾರಾಷದ ಸುಕೇತ್ರ ದೇವು ಅಳಂದಿಗೆ ಶನಿವಾರ 8 ರಂದು ಮುಂಜಾನೆ ರವಾನೆಯಾಯಿತು. ಪ್ರತಿ ವರ್ಷ ಆಷಾಢ ಮಾಸದ ಏಕಾದಶಿ ದಿನದಂದು ನಡೆಯುವ ಪಂಡರಪೂರದ ವಿಠಲನ ಜಾತ್ರೆಯಲ್ಲಿ ಅಂಕಲಿ ಸರಕಾರರ ಮಾನದ ಕುದುರೆಗೆ ಮಹತ್ವದ ಸ್ಥಾನ ನೀಡುತ್ತಾರೆ. ಈ ವರ್ಷ ಜುಲೈ 25 ರಂದು ಪಂಡರಪೂರದಲ್ಲಿ ನಡೆಯಲಿರುವ ಆಷಾಢ ಏಕಾದಶಿ ನಿಮಿತ್ಯ ಸುಕ್ಷೇತ್ರ. ದೇವು ಆಳಂದಿಯಿಂದ ನಡೆಯಲಿರುವ ಭವ್ಯ ಪಾದಯಾತ್ರೆಯಲ್ಲಿ ಅಂಕಲಿ ಸರಕಾರರ ಈ ಮಾನದ ಕುದುರೆ ಪಾಲ್ಗೊಳ್ಳಲಿದೆ. ಪಾರಂಭದಲ್ಲಿ ಇಂದು ಶನಿವಾರ ಮುಂಜಾನೆ ಅಂಕಲಿ ಸರಕಾರ ಉರ್ಜಿತಶಿಂಹ ರಾಜೆ ಶೀತೋಳೆ ಸರಕಾರ ಮತ್ತು ಮಹದಜಿರಾಜೆ ಶೀತೋಳೆ ಸರಕಾರ ಚೀಕೋಡಿ ಸದಲಗಾ ಶಾಸಕ ಗಣೇಶ್ ಹುಕ್ಕೇರಿ ಮಾನದ ಕುದುರೆಯ ಪೂಜೆ ಸಲ್ಲಿಸಿದನಂತರ ಗ್ರಾಮದಲ್ಲಿ ಮೆರವಣಿಗೆ ಮಾಡಿ ಬೀಳ್ಕೊಟ್ಟರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 