ಸಮಾಜಮುಖಿ ಕಾರ್ಯವೇ ರೋಟರಿ ಸಂಸ್ಥೆ ಗುರಿ
ಅಥಣಿ(ಶಿವಪುತ್ರ ಯಾದವಾಡ): ಸಮಾಜಮುಖಿ ಕಾರ್ಯವೇ ರೋಟರಿ ಸಂಸ್ಥೆ ಗುರಿ ಎಂದು ರೋಟರಿ ಕ್ಲಬ್ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ ಮಾತನಾಡುತ್ತಾ ಅಥಣಿ ತಾಲೂಕಿನಲ್ಲಿ ಎರಡು ದಶಕಗಳಿಂದ ರೋಟರಿ ಸಂಸ್ಥೆ ಸಮಾಜಮುಖಿ ಕಾರ್ಯ ಮಾಡುತ್ತ ಮುಂದೆ ಸಾಗಿದೆ. ಇಂದಿನ ವಿದ್ಯಾರ್ಥಿಗಳು ಸಮಾಜ ಕಾರ್ಯಗಳಲ್ಲಿ ತೋಡಗಬೇಕಾದರೆ , ತಮ್ಮ ಕಲಿಕೆಯೊಂದಿಗೆ ಸಮಾಜ ಸೇವೆಯನ್ನು ರುಡಿಸಿಕೊಳ್ಳಬೇಕು. ಎಂದು ಕಿವಿ ಮಾತು ಹೇಳಿದರು.
ಸ್ಥಳಿಯ ರಾಷ್ಟ್ರ ಪ್ರಶಸ್ತಿ ಭೂಷಿತ ವಿಮೋಚನಾ ಸಂಸ್ಥೆಯ ಸಂತರಾಮ ಪಿಯು ಮಹಾವಿದ್ಯಾಲಯದಲ್ಲಿ ಸಮಾಜ ಸೇವೆಯಲ್ಲಿ ತೋಡಗಿರುವ ರೋಟರಿ ಸಂಸ್ಥೆಯ ಅಂಗ ಸಂಸ್ಥೆಯಾದ ರೋಟ್ರ್ಯಾಕ್ಟ ಕ್ಲಬ್ ಇದರ ನೂತನ ಸದಸ್ಯರ ಪದಗ್ರಹನ ಸಮಾರಂಭ ನಡೆಯಿತು. ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಡಾ ಆನಂದ ಕುಲಕರ್ಣಿ ರೋಟ್ರ್ಯಾಕ್ಟ ಕ್ಲಬ್ ಜಿಲ್ಲಾಪ್ರತಿನಿಧಿ ರಾಹುಲ ಮೋಹಿತ, ಪ್ರಾಚಾರ್ಯ ಭಾರತಿ ಬಿಜಾಪುರೆ ಮಾತನಾಡಿದರು.
ರೋಟ್ರ್ಯಾಕ್ಟ ಕ್ಲಬ ಅಧ್ಯಕ್ಷರಾಗಿ ದೀಪಾ ಬಳ್ಳಿಗೇರಿ, ಕಾರ್ಯದರ್ಶಿಯಾಗಿ ದಾನೇಶ್ವರಿ ಚಿಮ್ಮಡ, ಖಜಾಂಚಿಯಾಗಿ ಮಂಜುಳಾ, ಉಪಾಧ್ಯಕ್ಷರಾಗಿ ತೋಹಿದ ಬಾಲದಾರ ಸೇರಿ 15 ವಿದ್ಯಾರ್ಥಿಗಳು ನಿರ್ದೇಶಕರಾಗಿ ಪದಗ್ರಹಣ ಸ್ವೀಕರಿಸಿದರು. ರೋಟರಿ ಕ್ಲಬ್ ಹಿರಿಯ ಸದಸ್ಯರು ಬಾಲಚಂದ್ರ ಬುಕಿಟಗಾರ, ಸಚಿನ ದೇಸಾಯಿ, ಮೇಗರಾಜ ಪರಮಾರ, ಡಾ ಅಮೃತ ಕುಲಕಣರ್ಣಿ, ಶಿವಾನಂದ ಕಾರೆ ಹಾಗೂ ಕ್ಲಬಿನ ಇತರ ಸದಸ್ಯರು ಮತ್ತು ವಿಮೋಚನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 