ಸಂತೆ ಕರ ವಸೂಲಿ ಟೆಂಡರ ಪ್ರಕ್ರಿಯೆ
Tender process for collection of market tax
ಜಮಖಂಡಿ 25: ನಗರ ಪ್ರದೇಶದ ವ್ಯಾಪ್ತಿಯಲ್ಲಿ ರಸ್ತೆಯ ಪಕ್ಕದಲ್ಲಿ ಕುಳಿತು ವ್ಯಾಪಾರ ಮಾಡುವ ಜನರಿಂದ ನಿಗದಿಪಡಿಸಿದ ದರಗಳಂತೆ ಸಂತೆ ಕರ ವಸೂಲಿ ಮಾಡುವ ಟೆಂಡರ ಪ್ರಕಿಯೆ ಜರುಗಿತು.
ನಗರದ ನಗರಸಭೆ ಸಭಾಭವನದಲ್ಲಿ ನಡೆದ ಕರ ವಸೂಲಾತಿ ಟೆಂಡರನಲ್ಲಿ 8 ಜನ ಭಾಗವಹಿದರು. 8 ಜನರಲ್ಲಿ ಲೀಲಾವಿನ ತಮ್ಮಗೆ ಬೇಕಾದಷ್ಟು ಅನುಕೂಲಕ್ಕೆ ತಕಂತೆ ಬೇಡಿಕೆಯನ್ನು ಬೇಡಿದರು. ಅದರಲ್ಲಿ ಹೆಚ್ಚು ಮೊತ್ತದ ಬೇಡಿಕೆಯನ್ನು ಬೇಡಿದವರಿಗೆ ಲೀಲಾವು ಟೆಂಡರ್ ಅಂತಿಮವಾಯಿತು.
ಲೀಲಾವ ಟೆಂಡರ್ನಲ್ಲಿ ಅತೀ ಹೆಚ್ಚು ಮೊತ್ತದ 16 ಲಕ್ಷ 65 ಸಾವಿರ ರೂ,ಗಳ ಬೇಡಿಕೆಯನ್ನು ಮುತ್ತಪ್ಪ ಹಣಮಂತ ಬಜಂತ್ರಿ ಅವರು ಪಡೆದು ಟೆಂಡರ ತಮ್ಮದಾಗಿಸಿಕೊಂಡರು ಎಂದು ನಗರಸಭೆಯ ಪೌರಾಯುಕ್ತ ಜೋತಿ ಗೀರಿಶ ತಿಳಿಸಿದರು.
2025-26 ನೇ ಸಾಲಿನಲ್ಲಿ ಅತೀ ಹೆಚ್ಚಿನ ಮೊತ್ತದ ಬೇಡಿಕೆಯಾದ 16 ಲಕ್ಷ 65 ಸಾವಿರ ರೂ.ಗಳು ಆಗಿದೆ. ಇದು 12 ತಿಂಗಳದ ವರೆಗೆ ಮಾತ್ರ ಇರುತ್ತದೆ. ಕಳೆದ 2024 - 25 ರ ಸಾಲಿನಲ್ಲಿ 6 ಲಕ್ಷ 40 ಸಾವಿರ ರೂ.ಗಳವರೆಗೆ ಬೇಡಿಕೆಯಾಗಿತ್ತು. ಅದು ಪರಸಪ್ಪ ಮಾಳಿ ಅವರಿಗೆ ಟೆಂಡರ ಆಗಿತ್ತು. ಕೇವಲ 9 ತಿಂಗಳ ಮಾತ್ರ ಟೆಂಡರ ಆಗಿತ್ತು ಎಂದರು.
ಇದೇ ಸಂದರ್ಭದಲ್ಲಿ ಪೌರಾಯುಕ್ತ ಜೋತಿ ಗೀರಿಶ, ಕಂದಾಯ ಅಧಿಕಾರಿ ಯಲ್ಲಪ್ಪ ಬಿದರಿ, ಕಂದಾಯ ನೀರೀಕ್ಷಕ ಅಮೀತ ಯಳಗಾರ, ಕಂದಾಯ ನೀರೀಕ್ಷಕ ಎಸ್.ಆರ್. ದೇವರಮನಿ, ಕರ ವಸೂಲಿಗಾರ ಅನೀಲ ಜೀರಗಾಳ ಸೇರಿದಂತೆ ಕರವಸೂಲಾತಿ ಟೆಂಡರ್ನಲ್ಲಿ ಪ್ರಕ್ರಿಯಲ್ಲಿ 8 ಜನರು ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 