ಮಂತ್ರಾಲಯ ಪಾದಯಾತ್ರಿಗಳೊಂದಿಗೆ ಕಿರುತೆರೆ ಕಲಾವಿದರು
Television artistes with Mantralaya Padayatris
ಮಹಾಲಿಂಗಪುರ 17: ಕಳೆದ 4ಂ ವರ್ಷಗಳಿಂದ ಮಂತ್ರಾಲಯ ಪಾದಯಾತ್ರೆ ಕೈಗೊಳ್ಳುತ್ತಿರುವ ಮಹಾಲಿಂಗಪುರದ ರಾಯರ ಭಕ್ತರು ಈ ಬಾರಿ ವಿಶೇಷ ಅನುಭವದೊಂದಿಗೆ 7 ದಿನಗಳಿಂದ ಪಾದಯಾತ್ರೆ ಬೆಳೆಸಿದ್ದಾರೆ.
ಪಾದಯಾತ್ರಿಗಳ ಬಾಲ್ಯದ ಗೆಳೆಯ ಕಿರುತೆರೆ ಹಾಸ್ಯ ಕಲಾವಿದ ಮಹಾಲಿಂಗಪುರದ ದಾನಪ್ಪ ಮೂಡಲಗಿ ಹಾಗೂ ಮಾ.ಆನಂದ ಕೂಡ ಪಾದಯಾತ್ರೆ ಬೆಳೆಸಿದ್ದು ವಿಶೇಷ. ವಿದ್ಯಾರ್ಥಿದೆಸೆಯಿಂದಲೂ ಮಂತ್ರಾಲಯ ಪಾದಯಾತ್ರೆ ಮಾಡುತ್ತಿದ್ದ ದಾನಪ್ಪ ಮೂಡಲಗಿ ಕಲಾವಿದರಾಗಿ ಬೆಂಗಳೂರು ಸೇರಿದ್ದರೂ ಪ್ರತಿ ವರ್ಷ ತವರೂರಿನಿಂದ ಪಾದಯಾತ್ರೆ ಕೈಗೊಳ್ಳುತ್ತಾರೆ. ಈ ವರ್ಷ ದಾನಪ್ಪನ ಜೊತೆ ಮಾ.ಆನಂದ ಕೂಡ ಮಹಾಲಿಂಗಪುರಕ್ಕೆ ಬಂದು ಮಹಾಲಿಂಗೇಶ್ವರ ದೇವಸ್ಥಾನದಿಂದ ಎಲ್ಲ ಭಕ್ತರೊಂದಿಗೆ ಪಾದಯಾತ್ರೆ ಬೆಳೆಸಿದ್ದಾರೆ. ಮಂಗಳವಾರ ಜ.15ರಂದು ಮಂತ್ರಾಲಯ ತಲುಪಲಿದ್ದಾರೆ.
ಪಾದಯಾತ್ರೆಯಲ್ಲಿ ರವಿ ತಟ್ಟಿಮನಿ, ಕೃಷ್ಣಗೌಡ ಪಾಟೀಲ, ವಿಷ್ಣುಗೌಡ ಪಾಟೀಲ, ವಿನೋದ (ಪಪ್ಪು) ಹುರಕಡ್ಲಿ, ಚನ್ನಪ್ಪ ಹುನ್ನೂರ, ರಾಜು ತಾಳಿಕೋಟಿ, ಮಲ್ಲಪ್ಪ ಯರಡ್ಡಿ, ರಾಜು ಕೋಳಿಗುಡ್ಡ, ಸಂಜಯ ತಾಳಿಕೋಟಿ ಹಾಗೂ ಬೆಂಗಳೂರಿನಿಂದ ದಾನಪ್ಪ ಮೂಡಲಗಿ ಗೆಳೆಯ ಮಾ.ಆನಂದ ರಾಯರ ಭಕ್ತರಾಗಿ ಗೆಳೆಯರೊಂದಿಗೆ ಹೆಜ್ಜೆ ಹಾಕಿದ್ದಾರೆ.
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ 