ಜಮಖಂಡಿ 06: ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ಹಾಗೂ ನಗರ ಘಟಕ ಮತ್ತು ದೈವ ಮಂಡಳಿ ಸಹಯೋಗದಲ್ಲಿ ಜೂನ್ 14 ರಂದು ಬೆಳಗ್ಗೆ 10 ಗಂಟೆಗೆ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ವಿಭಾಗಗಳಲ್ಲಿ
ಸಾಧನಗೈದ ಸಾಧಕರಿಗೆ ಮತ್ತು ಇಬ್ಬರಿಗೆ ಜೀವಮಾನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವದು ಎಂದು ಪ್ರತಿಭಾ ಪುರಸ್ಕಾರ ಅಧ್ಯಕ್ಷ ಉಮೇಶ ಬಾಂಗಿ ತಿಳಿಸಿದರು.
ನಗರದ ದಾನಮ್ಮ ದೇವಿ ಸಭಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು ಹಾಗೂ ರಾಜಕಾರಣಿಗಳು, ರಾಜಕೀಯ ಮುಖಂಡರು, ವಿವಿಧ ಸಂಘ ಸಂಸ್ಥೆಯವರು ಭಾಗವಹಿಸಲಿದ್ದಾರೆ. ಬಣಜಿಗ ಸಮಾಜದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಹೆಸರನ್ನು ನೋಂದಾಯಿಸಬೇಕು. ಹೆಸರು ನೋಂದಾಯಿಸುವ ಸ್ಥಳ ಮೋರೆ ಪ್ಲಾಟ್ ಶರಣ ಚೇತನ ಬ್ಯಾಂಕ್, ಬುರುಡಗಲ್ಲಿ ಗುರುಬಸವ ಬ್ಯಾಂಕ್, ಬಸವೇಶ್ವರ ಬ್ಯಾಂಕ್ ಪೋಸ್ಟ್ ಕಚೇರಿ ಹತ್ತಿರ ಹೀಗೆ ನಮ್ಮ ಬ್ಯಾಂಕ್ಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೆಸರು ನೋಂದಾಯಿಸಬೇಕು. ಕೊನೆಯ ದಿನಾಂಕ ಜೂನ್ 12 ರಂದು ಸಂಜೆ 5 ಗಂಟೆಗೆವರಗೆ ಮಾತ್ರ ಅವಕಾಶ ಇರುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿ,ಆರ್, ಅನಂತಪುರ, ಸಂಗಮೇಶ ಹಲವಾಯಿ, ಮಲ್ಲಪ್ಪ ಜೈನಾಪುರ, ಷಣ್ಮುಖಪ್ಪ ಮಹಾಬಳಶೆಟ್ಟಿ, ಶಂಕರ ಜಿರಲಿ, ಪ್ರಭು ಕಲ್ಯಾಣಶೆಟ್ಟಿ, ರಮೇಶ ಉಪ್ಪಿನ, ಶಿವಾನಂದ ಗೊಂದಿ, ಮಲ್ಲಿಕಾರ್ಜುನ ಇಂಗಳಗಾಂವಿ, ಮುರಗೆಪ್ಪ ಕುರಿ, ಉಮೇಶ ಮುರಗೋಡ, ಬಸವರಾಜ ಹರಕಂಗಿ, ಸಂತೋಷ ಚನ್ನಾಳ, ಶ್ರೀಶೈಲ್ ಮೊಟಗಿ, ಸಂಜಯ ಕಂಕನವಾಡಿ, ಮಲ್ಲಿಕಾರ್ಜುನ ಜಿರಲಿ, ಬಸವರಾಜ ನರಗುಂದ, ಮುರಗೇಶ ಕಲ್ಯಾಣಶೆಟ್ಟಿ ಸೇರಿದಂತೆ ಅನೇಕರು ಇದ್ದರು.