ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Talent award program for talented students

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ರಾಣಿಬೆನ್ನೂರ 6: ಇಲ್ಲಿನ ಉಮಾಶಂಕರ ನಗರದಲ್ಲಿರುವ ಶ್ರೀ ವಿಶ್ವವಿಭುರೇಕಿಧ್ಯಾನಪೀಠ  ದಲ್ಲಿಇತ್ತೀಚಿಗೆನಡೆದ ವಿಶ್ವಕರ್ಮ ಬ್ರಾಹ್ಮಣ ಸಮಾಜದ 2025 ರ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿಅತಿ ಹೆಚ್ಚು ಅಂಕ ಗಳಿಸಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕಾರ್ಯಕ್ರಮಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಗುಡ್ಡಾಚಾರಿಕಮ್ಮಾರ ಅವರು ಮಾತನಾಡಿದರು.   

ಬೆಳಕಿಲ್ಲದ ಹಾದಿಯಲ್ಲಿ ಸಾಗಬಹುದು ಆದರೆ ಕನಸಿಲ್ಲದ ಹಾದಿಯಲ್ಲಿ ಸಾಗಲು ಕಷ್ಟ ಎಂಬಂತೆ ಕನಸುಗಳನ್ನು ನನಸು ಮಾಡಿಕೊಳ್ಳಲು ಶ್ರಮಅಗತ್ಯ. ಪ್ರತಿಭಾವಂತ ವಿದ್ಯಾರ್ಥಿಗಳು ಎಷ್ಟೇ ಕಷ್ಟ ಬಂದರೂ ಅವುಗಳನ್ನು ಎದುರಿಸಿ ತಮ್ಮ ವಿದ್ಯಾಬ್ಯಾಸವನ್ನು ಮುಂದುವರಿಸಬೇಕು.ಉಚ್ಚ ಶಿಕ್ಷಣವನ್ನು ಪಡೆದುಕೊಂಡುಉತ್ತಮ ಸ್ಥಾನಮಾನಗಳನ್ನು ಪಡೆದು ಸಮಾಜ ಮೇಲೆ ಕಳಕಳಿಯನ್ನಿಟ್ಟುಕೊಂಡು ಸೇವೆಯನ್ನು ಮಾಡುವಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು.ಈ ನಿಟ್ಟಿನಲ್ಲಿಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಆಚಾರ್ಯ ಮೌನೇಶ್ವರಗುರೂಜೀಅವರಕಾರ್ಯ ಶ್ಲ್ಯಾಘನೀಯಎಂದರು. 

    ವಿಶ್ವವಿಭುರೇಕಿಧ್ಯಾನಪೀಠದಆಚಾರ್ಯ ಮೌನೇಶ್ವರಗುರೂಜೀ ಮಾತನಾಡಿ, ವಿಶ್ವಕರ್ಮ ಪರಂಪರೆಎಂದರೆ ಕೇವಲ ಒಂದುಜಾತಿಯ ಪರಂಪರೆಯಲ್ಲ. ಸ್ವಯಂಭೂ ವಿಶ್ವಕರ್ಮನ ಪರಂಪರೆ, ಮನ್ವಾದು ಪಂಚ ಬ್ರಹ್ಮರ್ಷಿಗಳ ಪರಂಪರೆ, ಪಂಚ ವಿಜ್ಞಾನಗಳ ಪರಂಪರೆ,  ನಾವೇಲ್ಲರೂ ವಿಶ್ವಕರ್ಮನಆರಾಧಕರಾಗಿರುವುದರಿಂದ ವೈಶ್ವಕರ್ಮಣರು. ಸ್ವಯಂಭೂ ವಿಶ್ವಕರ್ಮನ ಮುಖೋದ್ಧವರಾದ ಪಂಚಬ್ರಹ್ಮರ್ಷಿಗಳು ಮತ್ತು ಪಂಚ ಶಿಲ್ಪರ್ಷಿಗಳಗೋತ್ರ ಪರಂಪರೆಯಲ್ಲಿ ಬಂದಿರುವುದರಿಂದ ನಾವು ಬ್ರಾಹ್ಮಣರುಎಂದರು.ಸೂಪ್ತ ಜ್ಞಾನದ ಮೂಲವೇ ಅಂತರ್ಮನಸ್ಸುಅದನ್ನು ಪ್ರಕಟ ಪಡಿಸಲು ಸೂಕ್ತವಾದ ಪರಿಸರ, ಪ್ರಚೋದನೆ ಮತ್ತು ಪ್ರೋತ್ಸಾಹಗಳು ಲಭಿಸಿದಾಗ ವಿವಿಧ ಮಾಧ್ಯಮಗಳ ಮೂಲಕ ಪ್ರಕಟವಾಗಬಲ್ಲವು.ಕೆಲವರಿಗೆಚಿತ್ರಕಲೆಯಲ್ಲಿ, ತಾಳವಾಧ್ಯ ನುಡಿಸುವುದರಲ್ಲಿ, ಸಂಶೋಧನೆ, ವಿಜ್ಞಾನದಲ್ಲಿ ಆಸಕ್ತಿಗಳಿರುತ್ತವೆ. ಆಯಾ ವಿಷಯದಲ್ಲಿ ನಿರಂತರವಾಗಿಚಿಂತನೆ ಮಾಡಿ ಸಾಧನೆಗಳ ಮೂಲಕ ತಮ್ಮಲ್ಲಿರುವಜ್ಞಾನ ಶಕ್ತಿಗೆ ತಮಗೆಇಷ್ಟವಿರುವ ಮಾಧ್ಯಮಗಳ ಮೂಲಕ ಅಭಿವ್ಯಕ್ತಿಗೊಳಿಸಿ ಜನತೆಯ ಹೃನ್ಮನಗಳಲ್ಲಿ ಆಳವಾಗಿ ಇಳಿದು ಪ್ರತಿಭಾ ಪ್ರದರ್ಶನ ಮಾಡಿಆತ್ಮಾನಂದವನ್ನೋಕೊಡಬಲ್ಲರೋಅಂತಹವರನ್ನು ಪ್ರತಿಭಾವಂತರೆಂದುಕರೆಯಲಾಗುತ್ತದೆಎಂದರು.  

ಇದೇ ಸಂದರ್ಭದಲ್ಲಿ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಾದ ಸ್ವಪ್ನ ಕೆ ಅರ್ಕಸಾಲಿ (ಕಲಾ) 85.5 ಅ, ಕಾರ್ತೀಕ ಕೆ ಅರ್ಕಾಚಾರಿ (ವಾಣಿಜ್ಯ) 88.5ಅ, ಮೃಣ್ಮಯಿಎಸ್‌ಅರ್ಕಾಚಾರಿ (ವಿಜ್ಞಾನ) 89.1 ಅ, ಹರೀಶ ಪಿ ಕಮ್ಮಾರ (ವಿಜ್ಞಾನ) ಹಾಗೂ ಎಸ್‌ಎಸ್‌ಎಲ್‌ಸಿ ಯಲ್ಲಿ ನಯನಾಆರ್‌.ಮಾಯಾಚಾರಿ (ವಿಜ್ಞಾನ) 95.07 ಶೇ, ವೈಷ್ಣವಿ ವಿ ಮಾಯಾಚಾರಿ (ವಿಜ್ಞಾನ) 96.90 ಅ, ಪ್ರೇರಣಾ ಕೆ ಬಡಿಗೇರ (ವಿಜ್ಞಾನ) 97.9 ಅ ಇವರನ್ನು ಮೌನೇಶ್ವರಗುರೂಜೀ ಹಾಗೂ ಲಕ್ಷ್ಮೀದೇವಿ ದಂಪತಿಗಳು ಪುರಸ್ಕಾರ ನೀಡಿ ಸನ್ಮಾನಿಸಿದರು. 

ಸಂಶೋದಕಡಾಽ ಚಾಮರಾಜಕಮ್ಮಾರ, ಪ್ರಕಾಶ ಕೆ ಕಮ್ಮಾರ, ಲಕ್ಷ್ಮೀದೇವಿ ಅಮ್ಮನವರು, ಬಸವರಾಜಎಂ ಬಡಿಗೇರ, ಗುರೂಜೀ ಮಲ್ಲಿಕಾರ್ಜುನಆಚಾರ್ಯ, ಕೃಷ್ಣ ಎಂ ಬಡಿಗೇರ, ಸುರೇಶ ಎಂ ಬಡಿಗೇರ ಸೇರಿದಂತೆ ಮತ್ತಿತರರುಇದ್ದರು. ವಿಶ್ವರೂಪ ಲಲಿತಾಕಲಾನಿಕೇತನದ ವಿದ್ಯಾರ್ಥಿಗಳು ಪ್ರಾರ್ಥಿಸಿದರು.ಕೃಷ್ಣ ಬಡಿಗೇರ ನಿರೂಪಿಸಿದರು.ಪ್ರೇಮಾಎಸ್ ನಿಂಬರಗಿ ವಂದಿಸಿದರು.