ಖೇಡಗಿಯಲ್ಲಿ ಅದ್ದೂರಿಯಾಗಿ ನಡೆದ ಶ್ರೀಭೀರಲಿಂಗೇಶ್ವರ ಜಾತ್ರೆ
Sri Bheeralingeshwara fair held in Khedagi
ಇಂಡಿ 26: ತಾಲ್ಲೂಕಿನ ಭೀಮಾತೀರ ಸಂತ ಮಹಾತ್ಮರಿಗೆ ನೆಚ್ಚಿನ ತಾಣವಾಗಿದೆ, ಹಿಂತಾ ಮಹಿಮಾಂತ್ಮಕರ ಸಾಲಿನಲ್ಲಿ, ಸುಕ್ಷೇತ್ರ ಖೇಡಗಿ ಗ್ರಾಮದಲ್ಲಿ ಶ್ರೀಭೀರಲಿಂಗೇಶ್ವರರು ನೆಲೆನಿಂತು ಕಷ್ಠ ಎಂದು ಬಂದ ಭಕ್ತರಿಗೆ ಉದ್ಧರಿಸಿದ ಮಹಾತ್ಮರಾಗಿದ್ದಾರೆ.
ಇದು ಸುಮಾರು ಎರಡು ನೂರರಿಂದ ಮೂನ್ನುರು ವರ್ಷಗಳ ಹಳೆಯ ದೇವಾಲಯವಾಗಿದೆ. ಈ ಭಾಗದ ಭಕ್ತರು ಜಾತಿ ಮತ ಪಂಥಗಳನ್ನು ಲೇಕಿಸದೆ ಪ್ರತಿವರ್ಷ ಜಾತ್ರೆ ನಡೆಸುತ್ತಿದ್ದಾರೆ. ದಾಸೋಹ, ದೇವರ ಹೇಳಿಕೆಗಳು, ಡೂಳ್ಳಿನ ಹಾಡಿಕೆ ನಡೆಯುತ್ತಿದೆ. ನಾಗರಳ್ಳಿಯ ಲಕ್ಷ್ಮಿದೇವಿಯ ಪಲಕ್ಕಿ ಉಪಸ್ಥಿತಿಯಲ್ಲಿ ಭೀಮಾ ನದಿಯಲ್ಲಿ ಗಂಗಸೀತಾಳ ಮುಗಿಸಿ ನಂತರ ಈರಕಾರ ಕುಣಿತ ಮತ್ತು ದೇವರ ಹೇಳಿಕೆಗಳು ನಡೆಯುವ ಸಾಂಪ್ರಾದಾಯ.ಈ ಜಾತ್ರೆಗೆ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಭೇಟಿ ನೀಡಿ ದರ್ಶನ ಪಡೆದು ಆರ್ಶಿವಾದ ಪಡೆದರು.ಇದೇ ಸಂದರ್ಭದಲ್ಲಿ ಮುಖ್ಯ ಗುರುಗಳಾದ ವ್ಹಿ.ಎಚ್.ಬಿದನೂರ, ಮಾಜಿ ಪುರಸಭಾ ಸದಸ್ಯ ಸಿದ್ದು ಡಂಗಾ, ಅಣ್ಣಾರಾಯ ಕರನಾಯಕ, ಕಾಶಿನಾಥ್, ಮಡಗೋಂಡ, ಅಮೋಗಿ, ಸೀನೂರ, ದಯಾನಂದ ಬಿದನೂರು ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 