ಹನುಮ ಜಯಂತಿ ನಿಮಿತ್ಯ ವಿಶೇಷ ಕುಂಕುಮಾಲಂಕಾರ

ಶಿಗ್ಗಾವಿ 23: ಪಟ್ಟಣದ ಅಂಚೆ ಕಚೇರಿ ಹತ್ತಿರವಿರುವ ನೇರ ದೃಷ್ಟಿ ಆಂಜನೇಯ ಸನ್ನಿಧಿಯಲ್ಲಿ ಇಂದು ಹನುಮ ಜಯಂತಿ ನಿಮಿತ್ಯ ವಿಶೇಷ  ಕುಂಕುಮಾಲಂಕಾರ, ಹೋಮ ಹವನ ಪೂಜಾ ಹಾಗೂ ತೊಟ್ಟಿಲೊತ್ಸವ  ಕೈ ಕಂಕರ್ಯ ನೆರವೇರಿದವು ಅಲ್ಲದೇ ಪ್ರಸಾದ ಮತ್ತು ಅನ್ನಪ್ರಸಾದ ಸೇವೆ ನೆರವೇರಿತು. 

ಈ ಸಂದರ್ಭದಲ್ಲಿ ನೇರ ದೃಷ್ಟಿ ಆಂಜನೇಯ ದೇವಸ್ಥಾನ ಸಮಿತಿ ಸದಸ್ಯರಾದ ಸಿ.ವ್ಹಿ.ಚಿಕ್ಕಮಠ, ಮಹಾದೇವ ಆಡರಕಟ್ಟಿ, ಜಗದೀಶ ಶೇಜವಾಡಕರ, ಓಂಕಾರೇಶ್ವರ ಆಲೂರ, ಸಿ.ಎಸ್‌.ಕಲ್ಲಮನಿ, ಚಂದ್ರು ಸೋಲಭಕ್ಕನವರ, ಸಿದ್ದು ಮೆಳ್ಳಳ್ಳಿ, ಮುಂಜುನಾಥ ಭಜಂತ್ರಿ, ಸುಧಾಕರ ದೈವಜ್ಞ, ನಂದೀಶ ಬಾಣದ, ಜನಾರ್ದನ ಬ್ರಹ್ಮಾವರ, ಮಂಜುನಾಥ ಶೇಜವಾಡಕರ, ಪಿ.ಡಿ.ಕಲಾಲ, ಕುಲಕರ್ಣಿ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.