ಬೆಳಗಾವಿ: ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸರಕಾರ. ಬೆಂಗಳೂರು ಚಕೋರ- ಸಾಹಿತ್ಯ ವಿಚಾರ ವೇದಿಕೆ, ಬೆಳಗಾವಿ ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಘಟಕ ಬೆಳಗಾವಿ, ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಬೆಳಗಾವಿ ಇವರ ಸಹಯೋಗದಲ್ಲಿ ವಿಶೇಷ ಉಪನ್ಯಾಸ ಮಾಲಿಕೆ-8 ಯನ್ನು ದಿ.18ರಂದು ಸಂಜೆ 4 ಗಂಟೆಗೆ ಚನ್ನಮ್ಮ ಸರ್ಕಲ್ನಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದೆ.
ಇದರೊಂದಿಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ ಬಾನು ಮುಷ್ತಾಕ ಮತ್ತು ದೀಪಾ ಭಾಸ್ತಿ ಅವರಿಗೆ ಅಭಿನಂದನ ಗೌರವ ಮತ್ತು ಕಲೇಸಂ ಜಿಲ್ಲಾ ಘಟಕ ಬೆಳಗಾವಿ ಆಯೋಜಿಸಿದ ಬಾನು ಮುಷ್ತಾಕರ ಕಥೆಗಳ ಕುರಿತಾಗಿ ವಿಮರ್ಶಾ ಲೇಖನಗಳ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ.
ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಉದ್ಘಾಟನೆಯನ್ನು ಮಾಡಲಿದ್ದಾರೆ. ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ ಪ್ರಾಸ್ತಾವಿಕವಾಗಿ ಮಾತಾಡಲಿದ್ದು, ಬಾನು ಮುಷ್ತಾಕ್ ಅವರ ಕಥೆಗಳಲ್ಲಿ ಹೆಣ್ಣು ಮತ್ತು ಪ್ರತಿರೋಧದ ನೆಲೆ ವಿಷಯ ಕುರಿತಾಗಿ ವಿಶೇಷ ಉಪನ್ಯಾಸವನ್ನು ಚಿಕ್ಕೋಡಿ ಬೆಡಕಿಹಾಳ ಕೆ.ಎಂ.ಎ.ಸಿ ಮಹಾವಿದ್ಯಾಲಯ ಕನ್ನಡ ವಿಭಾಗ ಮುಖ್ಯಸ್ಥ ಡಾ.ಹೊಂಬಯ್ಯ ಹೊನ್ನಲಗೇರೆ ನೀಡಲಿದ್ದಾರೆ. ಬೆಳಗಾವಿ ಕಲೇಸಂ ಜಿಲ್ಲಾ ಘಟಕ ಅಧ್ಯಕ್ಷ ಡಾ. ಕೆ. ಅರ್ ಸಿದ್ದಗಂಗಮ್ಮ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಬೆಂಗಳೂರು ಕ ಸಾ ಅಕಾಡೆಮಿ ರಿಜಿಸ್ಟ್ರಾರ್ ಮುಖ್ಯ ಅತಿಥಿಗಳಾಗಿ ಕರಿಯಪ್ಪ ಎನ್, ಹಾಗೂ ಬೆಳಗಾವಿ ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಗೌರವ ಕಾರ್ಯದರ್ಶಿ ಆರ್. ಬಿ. ಕಟ್ಟಿ ಇವರು ಆಗಮಿಸಲಿದ್ದಾರೆ. ಗೌರವ ಉಪಸ್ಥಿತಿಯಲ್ಲಿ ಬೆಳಗಾವಿ ಕಲೇಸಂ ಜಿಲ್ಲಾ ಘಟಕ ಕಾರ್ಯದರ್ಶಿ ಡಾ ನಿರ್ಮಲಾ ಭಟ್ಟಲ್, ಬೆಳಗಾವಿ ಕಲೇಸಂ ಜಿಲ್ಲಾ ಘಟಕ ಖಜಾಂಚಿ ಡಾ ನೀತಾ ರಾವ್, ಬೆಳಗಾವಿ ಚಕೋರ ವೇದಿಕೆ ಸಂಚಾಲಕರಾದ ಎಲ್ ಎಸ್ ಶಾಸ್ತ್ರೀ, ನಾಗೇಶ ನಾಯಕ ಇವರು ಆಗಮಿಸಲಿದ್ದಾರೆ.
ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿ ಸರ್ವ ಸದಸ್ಯರು ಮತ್ತು ಬೆಳಗಾವಿ ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಕಲೇಸಂ ಜಿಲ್ಲಾ ಘಟಕ ಇವರು ಉಪಸ್ಥಿತರಿರಲಿದ್ದಾರೆ.