ಸಿದ್ದರಾಯ ತ್ರಿಮೂರ್ತಿ ಮಹಾರಾಜಮಠ ನಿಧನ
ಇಂಡಿ 25: ತಾಲೂಕಿನ ಗೋಳಸಾರ ಗ್ರಾಮದ ಸಿದ್ದರಾಯ ತ್ರಿಮೂರ್ತಿ ಮಹಾರಾಜಮಠ (32) ಬುಧವಾರ ನಿಧನರಾದರು.
ಮೃತರು, ತಾಯಿ, ಈರ್ವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಭಿನವ ಪುಂಡಲಿಂಗ ಮಹಾರಾಜರು, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಆಲಿಂಗರಾಯ ಮಹಾರಾಜ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯಲ್ಲಿ ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ಸೇರಿದಂತೆ ಹಲವು ಗಣ್ಯರು ಹಾಗೂ ಮಠಾಧೀಶರು ಪಾಲ್ಗೊಂಡಿದ್ದರು.
ಮೃತರ ಅಂತ್ಯಕ್ರಿಯೆ ಬುಧವಾರ ಸಾಯಂಕಾಲ ಸ್ವ-ಗ್ರಾಮದಲ್ಲಿ ನೆರವೇರಿತು.