ಬಿಡಿಸಿಸಿ ಬ್ಯಾಂಕಿಗೆ 13 ನಿರ್ದೇಶಕರ ಆಯ್ಕೆ

ಸಿರುಗುಪ್ಪ 16: ರಾಜ್ಯದ ಪ್ರಮುಖ ಸಹಕಾರಿ ಬ್ಯಾಂಕುಗಳಲ್ಲಿ ತನ್ನದೇ ಆದ ಪ್ರಾಮುಖ್ಯತೆ ಹೊಂದಿರುವ ಕಳೆದ ವರ್ಷ ಶತಮಾನೋತ್ಸವ ಆಚರಿಸಿಕೊಂಡಿರುವ ಹೊಸಪೇಟೆಯ ಬಳ್ಳಾರಿ ಜಿಲ್ಲಾ ಕೇಂದ್ರ ಕೋ ಆಪರೇಟಿವ್ ಬ್ಯಾಂಕ್ ಗೆ ನಡೆದ ಚುನಾವಣೆಯಲ್ಲಿ  ಬ್ಯಾಂಕಿನ ಒಟ್ಟು 14 ನಿರ್ದೇಶಕರ ಸ್ಥಾನಗಳ ಪೈಕಿ ಸಿರುಗುಪ್ಪ ಕ್ಷೇತ್ರ ಬಿಟ್ಟು ಉಳಿದ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕ್ಷೇತ್ರವಾರು ವಿಜೇತರ ವಿವರ ಕೂಡ್ಲಿಗಿ ತಾಲೂಕಿನಿಂದ ಕೆ ತಿಪ್ಪೇಸ್ವಾಮಿ ಗುಂಡು ಮುನುಗು ಸಂಡೂರು ತಾಲೂಕಿನಿಂದ ಜೆಎಂ ಶಿವಪ್ರಸಾದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹೊಸಪೇಟೆಯಿಂದ ಎಲ್‌ಎಸ್‌ ಆನಂದ, ಕಂಪ್ಲಿ ಕ್ಷೇತ್ರದಿಂದ ಪಿ ಮೂಕಯ್ಯ ಸ್ವಾಮಿ, ಹಗರಿ ಬೊಮ್ಮನಹಳ್ಳಿ ಯಿಂದ ಎಲ್ ಬಿ ಪಿ ಭೀಮ ನಾಯಕ, ಹಡಗಲಿಯಿಂದ ಐ ಗೋಳ ಚಿದಾನಂದಪ್ಪ, ಕೊಟ್ಟೂರು ತಾಲೂಕಿನಿಂದ ಐ.ದಾರುಕೇಶ, ಹರಪನಹಳ್ಳಿಯಿಂದ ವೈ ಅಣ್ಣಪ್ಪ, ಬಳ್ಳಾರಿ ತಾಲೂಕಿನಿಂದ ಬಿ ನವೀನ್ ಕುಮಾರ ರೆಡ್ಡಿ, ಕುರುಗೋಡು ತಾಲೂಕಿನಿಂದ ಹುಲುಗಪ್ಪ ನಾಯಕರ, ತಾಲೂಕು  ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘಗಳ  ಕ್ಷೇತ್ರದಿಂದ ವಿ ಆರ್ ಸಂದೀಪ್ ಸಿಂಗ್, ಪತ್ತಿನ ಮತ್ತು ಅರ್ಬನ್ ಬ್ಯಾಂಕ್ ಗಳಿಂದ ಪಿ ವಿಶ್ವನಾಥ, ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ ಹರಪನಹಳ್ಳಿ ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ ಅವರು ಜಯಭೇರಿ ಬಾರಿಸಿದರು ಸಿರುಗುಪ್ಪ ತಾಲೂಕು ಪತ್ತಿನ ಸಹಕಾರ ಸಂಘಗಳ ಕ್ಷೇತ್ರಕ್ಕೆ ಸಂಬಂಧಿಸಿ ಮೂವರು ಅಭ್ಯರ್ಥಿಗಳು ಕೋರ್ಟ್ ಮೊರೆ ಹೋಗಿದ್ದರಿಂದ ಭಾನುವಾರ ಮತದಾನ ನಡೆದಿಲ್ಲ  ಎಂದು ಚುನಾವಣಾ ಅಧಿಕಾರಿ ವಿಶ್ವಜಿತ್ ಮೆಹತಾ ಮಾಹಿತಿ ನೀಡಿದರು ಬಿಡಿಸಿಸಿ ಬ್ಯಾಂಕ್ ಗೆ 13 ನಿರ್ದೇಶಕರ ಆಯ್ಕೆಗೆ ಅವರ ಯಶಸ್ಸಿಗೆ ದೊರೆತಿರುವ ಗೌರವಕ್ಕೆ ಜಿಲ್ಲಾ ಸಾಕ್ಷರತಾ ಕಾರ್ಯಕಾರಿ ಸದಸ್ಯ ಜನಾಭಿಪ್ರಾಯ ಮುಖಂಡ ಅಬ್ದುಲ್ ನಬಿ ಅವರು ಅಭಿನಂದಿಸಿದ್ದಾರೆ.