ಛಾಯಾಗ್ರಾಹಕರಿಂದ ಆಥರ್ಿಕ ಸಹಾಯಕ್ಕಾಗಿ ಮನವಿ
ಮಹಾಲಿಂಗಪುರ 11: ಪಟ್ಟಣದ ವಲಯ ಛಾಯಾಗ್ರಾಹಕ ಸಂಘದ ಪರವಾಗಿ ಪದಾಧಿಕಾರಿಗಳು ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸವದಿಯವರಿಗೆ ಆಥರ್ಿಕ ಸಹಾಯಕ್ಕಾಗಿ ಮನವಿಯನ್ನು ನೀಡಿ ಭರವಸೆ ಪಡೆದರು.
ಈ ಮನವಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಸರಕಾರಿ, ಅರೆ ಸರಕಾರಿ ನೌಕರರಿಗೆ, ಸಂಘಟಿತ ಹಾಗೂ ಅಸಂಘಟಿತ ಕಾಮರ್ಿಕರಿಗೆ ಪರಿಹಾರ ಧನ ನೀಡಿದ್ದು ಅದೇ ರೀತಿಯಾಗಿ ಅಸಂಘಟಿತ ವಲಯವಾದ ಛಾಯಾಗ್ರಾಹಕರು ಎರಡು ತಿಂಗಳುಗಳಿಂದ ಸಭೆ-ಸಮಾರಂಭಗಳು, ಶಾಲಾ ಕಾಲೇಜುಗಳಿಲ್ಲದೆ ಅಂಗಡಿ ಬಾಡಿಗೆ, ಅಂಗಡಿಗೆ ಬೇಕಾಗುವ ಸಲಕರಣೆಗಳನ್ನು ಸಾಲ ಮಾಡಿ ತಂದಿರುವ ಕಾರಣ ಸಹಜವಾಗಿ ಇದರ ಬಡ್ಡಿ, ಲೈಟ್ ಬಿಲ್ಲು ಇನ್ನೂ ಅನೇಕ ತರಹದ ತೊಂದರೆಗಳು ತಲೆದೊರಿದ್ದು ಇನ್ನೂ ಎಷ್ಟು ದಿವಸ ಈ ಕೊರೊನಾ ಭಯ ಕಾಡುತ್ತೋ ಗೊತ್ತಿಲ್ಲ.
ಬಡ ಕುಟುಂಬಗಳಿಂದ ಬಂದಿರುವ ಛಾಯಾಗ್ರಾಹಕ ಹಾಗೂ ಸಹಾಯಕರಿಗೆ ಕೊರೊನಾ ಕಾಟದಿಂದ ಜೀವನೋಪಾಯದ ಎಲ್ಲ ಮಾರ್ಗಗಳು ಬಂದ ಆಗಿವೆ.ಕಾರಣ ಈ ಕಾಯಕವನ್ನೇ ಮೆಚ್ಚಿ ಜೀವನ ನಿರ್ವಹಣೆ ನಡೆಸುತ್ತಿರುವ ಈ ಕುಟುಂಬಗಳಿಗೆ ಸರಕಾರಗಳು ಆಥರ್ಿಕ ನೆರವು ನೀಡಿ ಈ ಉದ್ಯಮವನ್ನು ಪುನ ಚೇತನಗೊಳಿಸಬೇಕಾಗಿದೆ ಎಂದು ಮನವಿ ಪತ್ರದಲ್ಲಿ ಅರುಹಿಕ್ಕೊಳ್ಳಲಾಗಿದೆ.
ಈ ಸಮಯದಲ್ಲಿ ಶಿವಾನಂದ ಅಂಗಡಿ, ಮಹಾಲಿಂಗ ಸೋರಗಾವಿ, ಪ್ರಶಾಂತ ಕಡಪಟ್ಟಿ, ಸುದರ್ಶನ ಹಿಕಡಿ, ಅಭಿಷೇಕ ಗುಮಟೆ, ಮುತ್ತು ಕುಂಬಾರ, ರಾಕೇಶ ಕುಳಲಿಮಠ, ಸುನಿಲ ಅಂಬಿ, ಶಿವಾನಂದ ಮುಚಖಂಡಿ ಮುಂತಾದವರಿದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 