ಮತದಾನ ಮಾಡಿದ ರಂಭಾಪುರಿ ಶ್ರೀ

ಬಾಳೆಹೊನ್ನೂರು 26:  ಲೋಕಸಭಾ ಚುನಾವಣೆಯ ಅಂಗವಾಗಿ ಇಂದು ಬಾಳೆಹೊನ್ನೂರು ರಂಭಾಪುರಿ ಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ತಮ್ಮ ಮತ ಚಲಾಯಿಸಿದರು. 

ಮತದಾನದ ನಂತರ ಮಾತನಾಡಿದ ಜಗದ್ಗುರುಗಳು ಪ್ರಜಾಪ್ರಭುತ್ವದ ಯಶಸ್ವಿಗಾಗಿ ಪ್ರತಿಯೊಬ್ಬರೂ ಕೂಡಾ ಮತ ಚಲಾವಣೆ ಮಾಡುವುದು ಅವಶ್ಯಕ. ಮತದಾನ ಸಂವಿಧಾನ ನೀಡಿದ ಉನ್ನತ ಹಕ್ಕು ಎಂಬುದನ್ನು ಮರೆಯಬಾರದು. ರಾಜ್ಯದಲ್ಲಿ ಎರಡು ಹಂತದ ಮತದಾನ ನಡೆಯುತ್ತಿದ್ದು ಮೊದಲ ಹಂತದ ಮತದಾನದಲ್ಲಿ ತಾವು ಮತ ಚಲಾಯಿಸಿದ್ದೇವೆ. ಸುಭದ್ರ ಮತ್ತು ಸದೃಢ ಸರ್ಕಾರದ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಕರೆ ನೀಡಿದರು.