ಹಾವೇರಿಯ ಗ್ರಹ ಪ್ರವೇಶದಲ್ಲಿ ಪುಸ್ತಕಗಳ ದಾಸೋಹ

ರಾಣೇಬೆನ್ನೂರು 17:  ಮದುವೆ ಮುಂಜಿವೆ, ಗ್ರಹ ಪ್ರವೇಶಗಳ ಮಂಗಲ ಕಾರ್ಯಗಳಲ್ಲಿ ಬಂಧುಗಳು, ಮಿತ್ರರು ಆಗಮಿಸಿ ನೆನಪಿನ ಕಾಣಿಕೆ ನೀಡಿ ಶುಭ ಹಾರೈಸಿ ಆತಿಥ್ಯ ಸ್ವೀಕರಿಸಿ ಊಟ ಮಾಡಿ ಹೋಗುವುದು ಸಹಜ, ಆದರೆ ಇಲ್ಲಿ ಓರ್ವ ಪುಸ್ತಕ ಪ್ರೇಮಿ ತಮ್ಮ ಗ್ರಹ ಪ್ರವೇಶ ಕಾರ್ಯಕ್ರಮದಲ್ಲಿ ಬಂದವರಿಗೆಲ್ಲ ಮೌಲಿಕ ಪುಸ್ತಕಗಳನ್ನು ನೀಡಿ ಸರ್ವರ ಮೆಚ್ಚುಗೆಗೆ ಪಾತ್ರರಾಗಿರುವರು ಹಾವೇರಿ ತಾಲೂಕಿನ ಅಗಡಿ ಗ್ರಾಮದ ಕರಿಯಪ್ಪ ನರೇಂದ್ರ ಅವರು ಹಾವೇರಿಯ ಶಿವಾಜಿ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ತಮ್ಮ ಸಂಕಲ್ಪ ಗ್ರಹ ಪ್ರವೇಶದಲ್ಲಿ ಬಂಧು ಮಿತ್ರರಿಗೆ ಲಿಂ ಸಿದ್ದೇಶ್ವರ ಸ್ವಾಮೀಜಿಯವರ ಪ್ರವಚನಗಳ ಪುಸ್ತಕಗಳು, ಜ್ನಾನಪೀಠ ಪ್ರಶಸ್ತಿ ಪುರಸ್ಕೃತರ ಪುಸ್ತಕಗಳು ಹಾಗೂ ಇತರ ಮೌಲಿಕ ಪುಸ್ತಕಗಳನ್ನು ನೀಡಿ ಮಾದರಿ ಎನಿಸಿದ್ದಾರೆ, ಅವರ ಧರ್ಮಪತ್ನಿ ಶಿಲ್ಪಾ ಮಕ್ಕಳೂ ಸಹ ಅತಿಥಿ ದೇವೋಭವ ಎಂದು ಗೌರವಿಸಿದರು. ಹಾವೇರಿಯ ಶಿಲ್ಪ ಕರಿಯಪ್ಪ ನರೇಂದ್ರ ದಂಪತಿಗಳು ತಮ್ಮ ಗ್ರಹ ಪ್ರವೇಶ ಕಾರ್ಯಕ್ರಮದಲ್ಲಿ ಎಲ್ಲರಿಗೂ ಮೌಲಿಕ ಪುಸ್ತಕಗಳನ್ನು ಬಂದು ಮಿತ್ರರಿಗೆ ನೀಡಿದರು.