ಕರ್ನಾಟಕ ಅಪಾರ್ಟ್ಮಂಟ್ ಮಸೂದೆಗೆ ಆಗಸ್ಟ್‌ 6ರವರೆಗೆ ಸಾರ್ವಜನಿಕರ ಸಲಹೆ

ಕರ್ನಾಟಕ ಅಪಾರ್ಟ್ಮಂಟ್ ಮಸೂದೆಗೆ ಆಗಸ್ಟ್‌ 6ರವರೆಗೆ ಸಾರ್ವಜನಿಕರ ಸಲಹೆ  Public suggestions invited for Karnataka Apartment Bill until August 6

ಲೋಕದರ್ಶನ ವರದಿ 

ಬಳ್ಳಾರಿ 15: ಆಸ್ತಿ ಮಾಲೀಕರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದ್ದು,  ಆಸ್ತಿಯ ಸಂಪೂರ್ಣ ಹಕ್ಕು ಮಾಲೀಕರಿಗಿರಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಅವರು ಇಂದು ಕರ್ನಾಟಕ ಅಪಾಟ್ಮೆಂರ್ಟ್ (ಮಾಲೀಕತ್ವ ಮತ್ತು ನಿರ್ವಹಣೆ) 2026 ಕುರಿತು ಅಪಾರ್ಟ್‌ ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ಮಾತನಾಡಿದರು. ಆಸ್ತಿ ಕೊಳ್ಳುವಾಗ ಅದರ ಸಾಧಕ ಬಾಧಕಗಳನ್ನು ಮಾಲೀಕರೇ   ನೋಡಿಕೊಳ್ಳುವಂತಾಗಬೇಕು. ಮಾಲೀಕರಾದ ಮೇಲೆ ಒಪ್ಪಂದ, ನೋಂದಣಿ, ಒಳಗೆ ಹೋದ ನಂತರ ಬೇರೆ ಬೇರೆ ರೀತಿಯಲ್ಲಿ  ತಲೆದೋರುವ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಅರಿವಿದೆ ಎಂದರು.  ವಿಶ್ವವೇ ಬೆಂಗಳೂರಿನತ್ತ ತಿರುಗಿ ನೋಡುತ್ತಿದೆ: ಜನರಿಗೆ ಸಹಾಯ ಮಾಡಬೇಕೆನ್ನುವುದು  ನಮ್ಮ ಉದ್ದೇಶವಾಗಿದ್ದು, ಜನರು ಕಷ್ಟಪಟ್ಟು ತಲೆಯ ಮೇಲೆ ಸೂರು ಕಟ್ಟಿಕೊಂಡಿದ್ದಾರೆ. ಅದು ಸುಲಭದ ಮಾತಲ್ಲ. ಎಂದರು.