ವಿಠ್ಠಲ-ರುಕ್ಷ್ಮಿಣಿ ಲಕ್ಷ ದೀಪೋತ್ಸವಕ್ಕೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಚಾಲನೆ
President Yellana Gowda Patil inaugurates the Vitthal-Rukmini Laksha Deepotsava
ಮಹಾಲಿಂಗಪುರ: ನ. 1ರಿಂದ ಜರುಗುತ್ತಿರುವ ಸ್ಥಳೀಯ ಬುದ್ಧಿಪಿಡಿಯ ವಿಠ್ಠಲ-ರುಕ್ಮಿಣಿ ಹರಿನಾಮ ಸಪ್ತಾಹ, ಲಕ್ಷ ದೀಪೋತ್ಸವ ಹಾಗೂ ಮಹಾರಥೋತ್ಸವ ಕಾರ್ಯಕ್ರಮದ ನಾಲ್ಕನೇ ದಿನವಾದ ಮಂಗಳವಾರ ಸಂಜೆ ಸ್ಥಳೀಯ ಪುರಸಭಾ ಅಧ್ಯಕ್ಷ ಯಲ್ಲನಗೌಡ ಪಾಟೀಲ ಜ್ಯೋತಿ ಬೆಳಗುವುದರೊಂದಿಗೆ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸದ್ಭಕ್ತರು ಲಕ್ಷ ಜ್ಯೋತಿಗಳನ್ನು ಬೆಳಗಿಸಿದರು.
ಬೆಳಗ್ಗೆಯಿಂದ ಕಾಕಡಾರತಿ, ಮಹಾವಿಷ್ಣುಯಾಗ, ಪ್ರವಚನ, ಭಜನೆ, ಕೀರ್ತನೆ, ಹರಿಪಾಠ, ಮಹಾಪ್ರಸಾದ, ಜಾಗರಣೆ ಮುಂತಾದ ಧಾರ್ಮಿಕ ಕಾರ್ಯಗಳು ವಿಜೃಂಭಣೆಯಿಂದ ಜರುಗಿದವು.
ತಾಪಂ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ತಟ್ಟಿಮನಿ, ಬೆಳಗಲಿ ಪಪಂ ಮಾಜಿ ಅಧ್ಯಕ್ಷ ಸಿದ್ದುಗೌಡ ಪಾಟೀಲ, ಭಾಜಪ ನಗರ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ, ಸ್ಥಳೀಯ ಪುರಸಭಾ ಮುಖ್ಯಾಧಿಕಾರಿ ನಾಮದೇವ ಲಮಾಣಿ, ವಿಜುಗೌಡ ಪಾಟೀಲ, ಹನಮಂತ ಬಡಿಗೇರ, ಪಾಪಾ ನಾಲಬಂದ ಇವರನ್ನು ಗೌರವಿಸಲಾಯಿತು.
ವಿಠ್ಠಲ ರುಕ್ಮಿಣಿ ದೇವಸ್ಥಾನ ಆಡಳಿತ ಮಂಡಳಿಯ ಕೃಷ್ಣಗೌಡ ಪಾಟೀಲ, ಗೌಡಪ್ಪಗೌಡ ಪಾಟೀಲ, ವಿಷ್ಣುಗೌಡ ಪಾಟೀಲ, ಮಲ್ಲಪ್ಪ ಅಂಬಣ್ಣಗೋಳ, ರಾಜು ಮುದುಕಪ್ಪಗೋಳ, ಸದಾಶಿವ ಶೇಗುಣಿಸಿ, ಕುಮಾರ ಪವಾರ, ಮೌನೇಶ ದಾದನಟ್ಟಿ, ಶ್ರೀನಿವಾಸ ಪಾಟೀಲ, ಮಹಾಲಿಂಗಗೌಡ ಹೊಸಕೋಟಿ, ವಿಠ್ಠಲಗೌಡ ಪಾಟೀಲ, ಗಿರಿಮಲ್ಲ ಯಾದವಾಡ, ಅರುಣ ವಾಘ್ಮೋರೆ, ಬೇಬವ್ವ ಯಾದವಾಡ ಇತರರಿದ್ದರು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 