15ರಂದು ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆ

ರಾಣೆಬೇನ್ನೂರ 13: ಫೆಬ್ರವರಿ ತಿಂಗಳ 2024 ರಂದು ರಾಜನಹಳ್ಳಿ ವಾಲ್ಮೀಕಿ ಗುರು ಪೀಠದಲ್ಲಿ ನಡೆಯುವ ರಾಜ್ಯ ಮಟ್ಟದ ವಾಲ್ಮೀಕಿ ಜಾತ್ರೆಯ ಕುರಿತು ಪೂರ್ವಭಾವಿ ಹಾಗೂ ಜನಜಾಗೃತಿ ಸಭೆಯನ್ನು ಡಿ.15 ರಂದು ಮಧ್ಯಾಹ್ನ 3 ಗಂಟೆಗೆ ನಗರದ ಗಂಗಾಜಲ ಚೌಡೇಶ್ವರಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದೆ  ಎಂದು ತಾಲೂಕು ಅಧ್ಯಕ್ಷ ಚಂದ್ರ​‍್ಪ ಬೇಡರ ತಿಳಿಸಿದ್ದಾರೆ.ಈ ಸಭೆಗೆ ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದಪುರಿ ಮಹಾ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆಆದ ಕಾರಣ ಜಾತ್ರಾ ಪೂರ್ವ ಭಾವಿ ಸಭೆಗೆ ಹಾಗೂ ಜನಜಾಗೃತಿ ಸಭೆಗೆ ರಾಣೆಬೇನ್ನೂರ ತಾಲೂಕಿನ ಸಮಾಜದ ಹಿರಿಯ ಮುಖಂಡರು, ಸಮಾಜದ ಬಂಧುಗಳು, ಯುವಕರು ಹಾಗೂ ನೌಕರ ವರ್ಗದವರು ಪಾಲ್ಗೊಂಡು ಮಹತ್ವದ ಸಭೆಯನ್ನು ಯಶಸ್ವಿಗೊಳಿಸಬೇಕೆಂದು, ಬೇಡರ ಚಂದ್ರ​‍್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.