ನೀಟ್ ಪರೀಕ್ಷೆಯಲ್ಲಿ 536ನೇ ರಾಂಕ್ ಪ್ರಸನ್ನ

ರೋಣ  09: ರಾಜ್ಯಮಟ್ಟದಲ್ಲಿ ನೀಟ್ ಪರೀಕ್ಷೆಯಲ್ಲಿ 536ನೇ ರಾಂಕ್ ಪಡೆಯುವ ಮೂಲಕ ಚಿತ್ರದುರ್ಗದ ಎಮ್‌ಬಿಬಿಎಸ್ ನಲ್ಲಿ ಸರ್ಕಾರಿ ಸೀಟ್ ಪಡೆದಿರುವುದು ಹಮ್ಮೆಯ ವಿಷಯ. ಮಕ್ಕಳು ಶಿಕ್ಷಣಕ್ಕೆ ಹೆಚ್ಚು ಗಮನ ಹರಿಸುವುದರ ಜೊತೆಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಬಣಜಿಗ ಸಮಾಜದ ಅಧ್ಯಕ್ಷ ಮುತ್ತಣ್ಣ ಸಂಗಳದ ಹೇಳಿದರು.     ಪಟ್ಟಣದ ಬಣಜಿಗ ಸಮಾಜದ ಕೋ-ಆಪರೇಟಿವ್ ಸೊಸೈಟಿಯಲ್ಲಿ ನೀಟ್ ಪರೀಕ್ಷೆಯಲ್ಲಿ 536ನೇ ರ್ಯಾಂಕ್ ಪಡೆಯುವ ಮೂಲಕ ಚಿತ್ರದುರ್ಗದ ಎಮ್‌.ಬಿ.ಬಿ.ಎಸ್ ನಲ್ಲಿ ಸರ್ಕಾರಿ ಸೀಟ್ ಪಡೆದ ಪ್ರಸನ್ನ ಪ್ರಭು ಸಂಗಳದ ಅವರನ್ನು ಬಣಜಿಗ ಯುವ ಘಟಕ ಹಾಗೂ ಸಮಾಜದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.  

ಈ ಸಂದರ್ಭದಲ್ಲಿ ಮುತ್ತಣ್ಣ ಸಂಗಳದ, ರಾಜಣ್ಣ ಹೂಲಿ, ವೀರಣ್ಣ ನವಲಗುಂದ, ಶಿವಕುಮಾರ ಹುಲ್ಲೂರ, ಹುಚ್ಚೇಶ ಜವಳಿ, ವಿರೇಶ ಬಳ್ಳೂಳ್ಳಿ, ಕುಮಾರ ಕಡಗದ, ಫಕ್ಕಿರಶೆಟ್ಟರ್ ಕುರುಡಗಿ, ಮಲ್ಲಣ್ಣ ಗಡಾದ, ವಿರೇಶ ಐಹೋಳಿ, ಶಿವಪ್ಪ ಕಾತರಕಿ, ಶೇಖಣ್ಣ ಐಹೋಳಿ, ಅಶೋಕ ಜಕ್ಕಲಿ, ಉಮೇಶ ಸವಡಿ, ರಾಜು ಸಂಗಮಶೆಟ್ಟರಿ​‍್ಕರಣ ಚನ್ನವೀರಶೆಟ್ಟರ ಸೇರಿದಂತೆ ಸಮಾಜ ಮುಖಂಡರು ಹಾಗೂ ಯುವಕರು ಇದ್ದರು.