ಅಕ್ರಮ ಅಕ್ಕಿಯ ಸಂಗ್ರಹದ ಮೇಲೆ ಪೋಲಿಸ್ ಅಧಿಕಾರಿಗಳ ದಾಳಿ
Police officers raid illegal rice hoarding
ಜಮಖಂಡಿ 19: ಅಕ್ರಮವಾಗಿ ಸಂಗ್ರಹಿಸಿದ ಪಡಿತರ ಅಕ್ಕಿಕಾಳನ್ನು ತುಂಬಿದ ಚೀಲಗಳು 336, 17190 ಕೆಜಿ, ಪ್ರತಿ ಕೆಜಿಗೆ 34,60 ರಂತೆ ಸುಮಾರು ಬೆಲೆ ರೂ,594,774 ಪತ್ರಾಸ ಶೆಡ್ಡಿನಲ್ಲಿ ಇರುವ ಅಕ್ರಮದ ಅಕ್ಕಿಯ ಮೇಲೆ ಕಂದಾಯ ಮತ್ತು ಪೋಲಿಸ್ ಅಧಿಕಾರಿಗಳು ದಾಳಿ ನಡೆಸಿ. ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.
ನಗರದ ವಿಜಯಪೂರ ರಸ್ತೆಯ ಪಕ್ಕದಲ್ಲಿ ಇರುವ ಹಾಜಿಲಾಲ ಪೈಲ್ವಾನ ಅವರ ಪತ್ರಾಸ ಶೆಡ್ಡಿನಲ್ಲಿ ಸರಕಾರದಿಂದ ಹಂಚಿಕೆಯಾದ ಪಡಿತರ ಅಕ್ಕಿ ಕಾಳುಗಳನ್ನು ಕಡಿಮೆ ಬೆಲೆಗೆ ಪಡೆದುಕೊಂಡು. ಪಕ್ಕದ ಮಹಾರಾಷ್ಟ್ರಕ್ಕೆ ಮಾರಾಟ ಮಾಡುತ್ತಿದ್ದು.366 ಚೀಲಗಳನ್ನು ತುಂಬಿದ್ದು. 17190 ಕೆಜಿಯ ಪಡಿತರ ಅಕ್ಕಿಯಾಗಿದ್ದು. ಸರಕಾರದ ಬೆಲೆಯಂತೆ ಕೆಜಿಗೆ 36,60 ರಂತೆ ಸುಮಾರು ರೂ,594.774 ಬೆಲೆ ಬಾಳುವ ಅಕ್ಕಿಯ ಮಾಲನ್ನು ಅಕ್ರಮಾವಾಗಿ ಸಂಗ್ರಹಿಸಿದ್ದರು ಎನ್ನಲಾಗಿದೆ.
ಕೂಲಿ ಕಾರ್ಮಿಕರಾದ ಪೈಗಂಬರ ಅಬ್ಬುಸಾಬ ಮಾಹಾಲಿಂಗಪೂರ, ದಾದಾಫೀರ ಸರಾ್ರಜ ಗಲಗಲಿ ತೂಕ ಮಾಡುವ ಸಮಯದಲ್ಲಿ ಅಧಿಕಾರಿಗಳ ದಾಳಿ ವೇಳೆಯಲ್ಲಿ ಸಿಕ್ಕಿದ್ದು. ಅವರು ಹೇಳಿಕೆಯ ಮೇಲೆ ಆರೋಪಿತರಾದ ಹಾಜಿಲಾಲ ಹಾಜಿಅನ್ವರ ಪೈಲವಾನ, ಮುಸ್ತಾಕ ಬಬಲು ಉರ್ಫ ಬಬ್ಬು ರೂಟ್, ರಿಜ್ವಾನ ಹಾಜಿಲಾಲ ಪೈಲವಾನ, ಬಬಲು ಉರ್ಫ ಬಬ್ಬು ರೂಟ್ ಅವರ ಮೇಲೆ ಶಹರ
ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ತಿಳಿದ್ದು ಬಂದಿದೆ.
ಅಕ್ರಮವಾಗಿ ಸಂಗ್ರಹಿಸಿದ ಪಡಿತರ ಅಕ್ಕಿಯ ಶೆಡ್ಡಿನ ಮೇಲೆ ದಾಳಿ ವೇಳೆಯಲ್ಲಿ ಆಹಾರ ನೀರೀಕ್ಷಕ ಆನಂದ ರೇವು ರಾಠೋಡ, ಗ್ರಾಮ ಲೆಕ್ಕಾಧಿಕಾರಿ ಪ್ರವೀಣಕುಮಾರ ರಾಜಶೇಖರ ಕಾರಾಜಣಗಿ, ಹೆಚ್ಚುವರಿ ಗ್ರಾಮ ಆಡಳಿತಾಧಿಕಾರಿ ಸಾಜೀದ ಜಲಾಲುದ್ದಿನ್ ಹದಲಿ, ಶಹರ ಪೋಲಿಸ್ ಠಾಣೆಯ ಕ್ರೈಂ ಪಿಎಸ್ಐ, ಬಿ,ಎಂ, ಕುಂಬಾರ ಸಿಬ್ಬಂಧಿಗಳಾದ ಎಸ್,ಟಿ,ಪಾಟೀಲ, ಎಸ್,ವೈ, ಆಸಂಗಿ, ಎಸ್,ಎಚ್,ಕೋಟಿ, ಎಸ್, ಎಂ, ನಾಯಕ, ರಾಜು ಪೂಜಾರಿ ಇದ್ದರು ಎನ್ನಲಾಗಿದೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 