ಕಳ್ಳಬಟ್ಟಿ ಸರಾಯಿ ಮಾರಾಟಗಾರರ ಬಂದನ
ಲೋಕದರ್ಶನ ವರದಿ
ಯರಗಟ್ಟಿ 19: ಮಾನ್ಯ ಅಬಕಾರಿ ಉಪ ಅಧಿಕ್ಷರು ರಾಮದುರ್ಗ ನೇತ್ರತ್ವದಲ್ಲಿ ಸವದತ್ತಿ ವಲಯ ಅಬಕಾರಿ ನಿರೀಕ್ಷಕರು, ಉಪ ನಿರೀಕ್ಷಕರು ಖಚಿತ ಮಾಹಿತಿ ಪಡೆದು ಕಳ್ಳಬಟ್ಟಿ ಸರಾಯಿ ಮಾರುತ್ತಿದ್ದ ಸವದತ್ತಿ ತಾಲೂಕಿನ ಬಡ್ಲಿ ತಾಂಡಾದ ಪಾರ್ವತಿ ರಮೇಶ ಲಮಾಣಿ ಆರೋಪಿಯನ್ನು ಅ.18 ರಂದು ದಾಳಿ ಮಾಡಿದಾಗ ಸುಮಾರು ನಾಲ್ಕು ಲೀಟರ್ ಕಳ್ಳಬಟ್ಟಿ ಸರಾಯಿ ಸಿಕ್ಕದೆ ಹಾಗೂ ಅ.19 ರಂದು ಮತ್ತೆ ದಾಳಿ ಮಾಡಿದಾಗ ಅದೇ ಗ್ರಾಮದ ರಾಮಪ್ಪ ದುರಗಪ್ಪ ಪೂಜಾರಿ ಎಂಬಾತನಲ್ಲಿ ಎರಡು ಲೀಟರ್ ಕಳ್ಳಬಟ್ಟಿ ಸರಾಯಿ ಮಾರಾಟ ಮಾಡಲು ಸಂಗ್ರಹಿಸಿಟ್ಟಾಗ ಸಿಕ್ಕಿದ್ದು ಪ್ರಕರಣವನ್ನು ದಾಖಲಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ನಿರೀಕ್ಷಕ ರವಿ.ಎಮ್.ಮರಿಗೌಡರ, ಉಪ ನಿರೀಕ್ಷಕ ಆರ್.ಜಿ.ಆರೆನ್ನವರ, ಸಿಬ್ಬಂದಿಗಳಾದ ಸಂತೋಷ ಸಂಜೀವಪ್ಪನವರ, ಬಿ.ಬಿ.ಸುಣಗಾರ, ಎಸ್.ಜಿ.ತಳವಾರ, ಕಿರಣ ತೆರದಾಳ, ಅಬಕಾರಿ ರಕ್ಷಕಿಯರಾದ ಎಸ್.ಡಿ.ಕಮಲಾಪೂರ, ಪ್ರಿಯಂಕಾ ಗಲಬಿ ಪ್ರಕರಣ ಬೇದಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 