ಕಳ್ಳಬಟ್ಟಿ ಸರಾಯಿ ಮಾರಾಟಗಾರರ ಬಂದನ
ಲೋಕದರ್ಶನ ವರದಿ
ಯರಗಟ್ಟಿ 19: ಮಾನ್ಯ ಅಬಕಾರಿ ಉಪ ಅಧಿಕ್ಷರು ರಾಮದುರ್ಗ ನೇತ್ರತ್ವದಲ್ಲಿ ಸವದತ್ತಿ ವಲಯ ಅಬಕಾರಿ ನಿರೀಕ್ಷಕರು, ಉಪ ನಿರೀಕ್ಷಕರು ಖಚಿತ ಮಾಹಿತಿ ಪಡೆದು ಕಳ್ಳಬಟ್ಟಿ ಸರಾಯಿ ಮಾರುತ್ತಿದ್ದ ಸವದತ್ತಿ ತಾಲೂಕಿನ ಬಡ್ಲಿ ತಾಂಡಾದ ಪಾರ್ವತಿ ರಮೇಶ ಲಮಾಣಿ ಆರೋಪಿಯನ್ನು ಅ.18 ರಂದು ದಾಳಿ ಮಾಡಿದಾಗ ಸುಮಾರು ನಾಲ್ಕು ಲೀಟರ್ ಕಳ್ಳಬಟ್ಟಿ ಸರಾಯಿ ಸಿಕ್ಕದೆ ಹಾಗೂ ಅ.19 ರಂದು ಮತ್ತೆ ದಾಳಿ ಮಾಡಿದಾಗ ಅದೇ ಗ್ರಾಮದ ರಾಮಪ್ಪ ದುರಗಪ್ಪ ಪೂಜಾರಿ ಎಂಬಾತನಲ್ಲಿ ಎರಡು ಲೀಟರ್ ಕಳ್ಳಬಟ್ಟಿ ಸರಾಯಿ ಮಾರಾಟ ಮಾಡಲು ಸಂಗ್ರಹಿಸಿಟ್ಟಾಗ ಸಿಕ್ಕಿದ್ದು ಪ್ರಕರಣವನ್ನು ದಾಖಲಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ನಿರೀಕ್ಷಕ ರವಿ.ಎಮ್.ಮರಿಗೌಡರ, ಉಪ ನಿರೀಕ್ಷಕ ಆರ್.ಜಿ.ಆರೆನ್ನವರ, ಸಿಬ್ಬಂದಿಗಳಾದ ಸಂತೋಷ ಸಂಜೀವಪ್ಪನವರ, ಬಿ.ಬಿ.ಸುಣಗಾರ, ಎಸ್.ಜಿ.ತಳವಾರ, ಕಿರಣ ತೆರದಾಳ, ಅಬಕಾರಿ ರಕ್ಷಕಿಯರಾದ ಎಸ್.ಡಿ.ಕಮಲಾಪೂರ, ಪ್ರಿಯಂಕಾ ಗಲಬಿ ಪ್ರಕರಣ ಬೇದಿಸಿದ್ದಾರೆ.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 