ದೈಹಿಕ ಶಿಕ್ಷಕ ಗಡದ ಸೇವಾ ನಿವೃತ್ತಿ: ಬಿಳ್ಕೊಡುವ ಸಮಾರಂಭ
Physical education teacher Gadad's retirement from service: Farewell ceremony
ನೇಸರಗಿ 24: ಸಮೀಪದ ದೇಶನೂರ ಗ್ರಾಮದ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಆಶ್ರಮ ಶಾಲೆಯ ದೈಹಿಕ ಶಿಕ್ಷಕರಾದ ಎ.ಎಸ್. ವರ ಇವರ ಸೇವಾ ನಿವೃತ್ತಿಯ ನಿಮಿತ್ತ ಬಿಳ್ಕೊಡುವ ಸಮಾರಂಭ ನಡೆಯಿತು.
ಸಾನಿಧ್ಯವನ್ನು ಸ್ನಾನಿಕ ಅರುಳಪ್ಪರ ಮಠದ ಡಾ. ಫಾ. ಮೆನಿನೋ ಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಬೆಳಗಾವಿ ಬಿಡಿಬಿಇ ಕಾರ್ಯದರ್ಶಿಗಳಾದ ಫಾ. ಜೆರಾಲ್ಡ್ ವಹಿಸಿದ್ದರು. ಮಕ್ಕಳೇ ದೇವರೆಂದು ಭಾವಿಸಿದ ಎ.ಎಸ್.ಗಡದವರ ಅವರು ಇಬ್ಬರು ಶಾಲಾ ಮಕ್ಕಳನ್ನು ಲಾಟರಿ ಮುಖಾಂತರ ಆಯ್ಕೆ ಮಾಡಿ ವಿಷ್ಣು ಕೊತ್ತಲ, ತನು ಎಮ್ಮಿ ಇವರ ಪಾದ ಪೂಜೆ ಮಾಡಿ ಶಾಲು ಹೊದಿಸಿ ಸನ್ಮಾನಿಸಿರುವದು ವಿಶೇಷವಾಗಿತ್ತು.ಇದೇ ವೇಳೆ ನಿವೃತ್ತರಾದ ಎ. ಎಸ್. ಗಡದವರ ಅವರು ಶಾಲೆಗೆ ಡಬ್ಬಲ್ ಡೋರ್ ದೊಡ್ಡ ಟ್ರೇಝರಿ, ಹಾಗೂ ಸ್ನಾನಿಕ ಅರುಳಪ್ಪರ ವಿರಕ್ತ ಮಠಕ್ಕೆ ರೂ. 11111=00 ಹಾಗೂ ಸಂವಿಧಾನ ಪೀಠಿಕೆ ಪೋಟೊವನ್ನು ದೇಣಿಗೆ ನೀಡಿದರು. ಬಿ.ಡಿ.ಬಿ.ಇ. ಹಾಗೂ ಸ್ನಾನಿಕ ಅರಳುಪ್ಪರ ಮಠ, ಎರಡೂ ಆಶ್ರಮ ಶಾಲೆಗಳ ಪರವಾಗಿ ಫಾ. ಜೆರಾಲ್ಡ್ ಡಿ ಸಿಲ್ವಾ, ಪೂಜ್ಯ ಡಾ.ಫಾ.ಮೆನಿನೋ, ಹಾಗೂ ಪ್ರಧಾನ ಗುರುಗಳು ಮತ್ತು ಸಿಬ್ಬಂದಿಗಳು ದೈಹಿಕ ಶಿಕ್ಷಕ ಎ.ಎಸ್. ಗಡದವರ ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಸಿಆರ್ ಸಿಗಳಾದ ರಾಜು ಹಕ್ಕಿ, ಗ್ರಾ.ಪಂ ಅಧ್ಯಕ್ಷೆ ಸುರೇಖಾ.ಬ. ಕೇದಾರಿ, ಉಪಾಧ್ಯಕ್ಷೆ ಶಂಕರಮ್ಮ, ಸಂ. ಚಡಿಚಾಳ, ದೇಶನೂರ ಪಿಕೆಪಿಎಸ್ ಅದ್ಯಕ್ಷ ಬಿ.ಬಿ.ಕೇದಾರಿ, ಮಾಜಿ ತಾ.ಪಂ ಸದಸ್ಯ ಎಸ್.ಬಿ.ಕಮತಗಿ, ದೈ.ಶಿ.ಪರೀವಿಕ್ಷಕ ಕೆ.ಎಸ್.ಕಾಂಬಳೆ, ಹಿ.ಪ್ರಾ.ಕೆ.ಹೆ.ಮ.ಆಶ್ರಮ ಶಾಲೆ ಪ್ರಧಾನ ಗುರುಗಳಾದ ಎಸ್.ಪಿ.ಪತ್ತಾರ, ಮೊಹರೆ .ಕಿ.ಪ್ರಾ.ಕೆ.ಜಿ.ಮ.ಆಶ್ರಮ ಶಾಲೆ ಪ್ರಧಾನ ಗುರುಗಳಾದ ಜಿ.ಬಿ.ಯರಗುದ್ದಿ, ಊರಿನ ಗಣ್ಯರು, ಶಿಕ್ಷಕರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 