ರಾಜ್ಯ ಸರ್ಕಾರದ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ:ಕಾರಜೋಳ
People are tired of the state government's mismanagement: Karajola
ಬಳ್ಳಾರಿ 17: (17) ರಂದು ಸಿದ್ದರಾಮಯ್ಯ ನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರೆ ವರ್ಷ ಆಗಿದೆ. ಅವರ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ. ಸರ್ಕಾರಕ್ಕೆ ಜನ ಹಿಡಿಶಾಪ ಹಾಕುತ್ತಿದ್ದಾರೆ ಎಂದು . ಮಾಜಿ ಸಚಿವ, ಸಂಸದ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು. ನಗರದಲ್ಲಿಂದು ಆಯೋಜಿಸಿರುವ ಬಿಜೆಪಿ ಪ್ರತಿಭಟನಾ ರಾಲಿಯಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು, ಪತ್ರಕರ್ತರೊಂದಿಗೆ ಮಾತನಾಡಿ, ಕಾಂಗ್ರೆಸ್ ನ ಕೊನೆ ಸಿಎಂ ಸಿದ್ದರಾಮಯ್ಯ ಆಗುತ್ತಾರೆ. ನಾನು ಶರಣರ ನಾಡಿನಿಂದ ಬಂದಿದ್ದೇನೆ. ನಾವು ಏನ್ ಹೇಳ್ತಿವೋ ಅದೆಲ್ಲಾ ಆಗಿದೆ. ಬಳ್ಳಾರಿ ನೆಲದಲ್ಲಿ ಗುಂಡಿನ ದಾಳಿ ಮಾಡಿಸಿ ಅವರ ಶಾಸಕ ಅಮಾಯಕನನ್ನು ಕೊಂದಿದ್ದಾನೆ. ಕೂಡಲೇ ಭರತ್ ರೆಡ್ಡಿಯನ್ನ ಬಂಧಿಸಬೇಕಿತ್ತು. ಆದರೆ, ಅವರ ಮೇಲೆ ಕೇಸ್ ಹಾಕಿಲ್ಲ. ನಾವು ಪ್ರತಿಭಟನೆ ಮಾಡಲು 50 ಲಕ್ಷ ಡಿಪೋಸಿಟ್ ಇಡಬೇಕು ಅಂತಾರೆ. ಸಾರ್ವಜನಿಕ ಸಭೆ ಸಮಾರಂಭಗಳಿಗೆ ಬ್ರಿಟಿಷರೂ ಅಡ್ಡಿ ಪಡಿಸಿಲ್ಲ. ಅವರು ದುರಾಡಳಿತ ಮಾಡಿದಾಗ ಜನ ಬ್ರಿಟಿಷರನ್ನು ಓಡಿಸಿದರು. ಇದೀಗ ಸಿದ್ದರಾಮಯ್ಯ ಅವರನ್ನ ಓಡಿಸಲು ಕಾಲ ಹತ್ತಿರ ಬಂದಿದೆ ಎಂದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 