ಬಗರ್ ಹುಕುಂ ಸಾಗುವಳಿ ಸಮಿತಿಗೆ ಪಾರ್ವತಿ ಪಾಟೀಲ್ ಆಯ್ಕೆ

ಕಂಪ್ಲಿ 09: ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯರಾಗಿ ಸಣಾಪುರ ಗ್ರಾಮದ ಪಾರ್ವತಿ ಪಾಟೀಲ್ ರಾಜಕುಮಾರ ನಾಮನಿರ್ದೇಶನಗೊಂಡಿದ್ದಾರೆ. ಅಧ್ಯಕ್ಷರಾಗಿ ಶಾಸಕ ಜೆ.ಎನ್‌.ಗಣೇಶ್, ಸದಸ್ಯ ಕಾರ್ಯದರ್ಶಿಯಾಗಿ ತಹಸೀಲ್ದಾರ ಶಿವರಾಜ ಸಮಿತಿಯಲ್ಲಿದ್ದಾರೆ ಎಂದು ಕಂದಾಯ ಇಲಾಖೆಯ ಸರ್ಕಾರದ ಆಧೀನ ಕಾರ್ಯದರ್ಶಿ ಕೆ.ಜಗದೀಶ್ 2023ರ ಡಿ.5ರಂದು ಅಧಿಸೂಚನೆ ಹೊರಡಿಸಿದ್ದಾರೆ.