26 ರಿಂದ ಮೂರು ದಿನಗಳ ಕಾಲ ಪಾಂಡುರಂಗ ರುಕ್ಮಾಯಿ ದೇವರ ದಿಂಡಿ ಉತ್ಸವ
Pandurang Rukmai Devara Dindi Utsav for three days from 26th
ರಾಣಿಬೆನ್ನೂರ 26: ಪಾಂಡುರಂಗ ರುಕ್ಮಾಯಿ ದೇವರ ದಿಂಡಿ ಉತ್ಸವವು ಎ 26 ರಿಂದ 28 ವರೆಗೆ ಮೂರು ದಿನಗಳ ಕಾಲ ದೇವರಗುಡ್ಡ ರಸ್ತೆಯ ಪಾಂಡುರಂಗ ರುಕ್ಮಾಯಿ ದೇವಸ್ಥಾನದಲ್ಲಿ ಜರುಗಲಿದೆ ಎಂದು ನಾಮದೇವ ಸಮಾಜದ ಅಧ್ಯಕ್ಷ ಪ್ರವೀಣ ಎಸ್ ಕೋಪರ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎ26 ರಂದು ಸಂಜೆ 6-00 ಗಂಟೆಗೆ ಪೋತಿ ಸ್ಥಾಪನೆಯು ಕೃಷ್ಣಪ್ಪ ಕೋಪರ್ಡೆ ಹಾಗೂ ಸಂತ ಮಹೋದಯರಿಂದ ಜರುಗುವುದು. ಸಂಜೆ 7-30 ರಿಂದ 9-00 ರವರೆಗೆ ಭಜನೆ, ಕೀರ್ತನೆ ನಡೆಯುವುದು.
ಎ27 ಸೋಮವಾರ ದಂದು ಬೆಳ್ಳಿಗ್ಗೆ 5-00 ಗಂಟೆಗೆ ಕಾಕಡಾರತಿ ಭಜನೆ, ಮತ್ತು 6-30 ರಿಂದ 9-00 ರವರೆಗೆ ಮಹಾ ಗಣಪತಿ, ಪಾಡುರಂಗ ರುಕ್ಮಾಯಿ ಹಾಗೂ ತುಳಜಾ ಭವಾನಿ ದೇವರಿಗೆ ಅಭಿಷೇಕ ಮತ್ತು ಪೂಜಾ ವಿಧಾನಗಳು ನಡೆಯುವವು. ನಂತರ ಸಂತರಿಂದ ಭಜನೆ ಕಾರ್ಯಕ್ರಮ ನಡೆಯುವುದು. ಅಂದು ಸಂಜೆ 6-00 ಗಂಟೆಯಿಂದ 8-00 ಗಂಟೆಯವರೆಗೆ ಕೀರ್ತನೆ ಕಾರ್ಯಕ್ರಮವನ್ನು ಪಂಡರಾಪುರದ ಯಶವಂತ ಪ್ರಭಾಕರ ಬುವಾ ಬೋದಲೆ ಮಹಾರಾಜರು ನಡೆಸಿಕೊಡುವರು ಈ ವೇಳೆ ಹೆಸರಾಂತ ಮೃದಂಗಕಾರರು, ಗಾಯಕರು, ಹಾಗೂ ಸಂತ ಮಹಾಂತರು ಆಗಮಿಸುವರು.
ಎ.28 ಮಂಗಳವಾರ ದಂದು ಬೆಳ್ಳಿಗ್ಗೆ 8-30ಕ್ಕೆ ಪಾಂಡುರಂಗ ರುಕ್ಮಾಯಿ ಪಾಲಕಿ ಉತ್ಸವವು ನಗರದ ಪ್ರಮುಖ ರಾಜಬೀದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಬಂದು ತಲುಪುವುದು. ನಂತರ ಸಂತ ಪೂಜಾ, ಮಹಾ ಮಂಗಳಾರತಿ, ಸಂತರ ಕೀರ್ತನೆ ನಡೆಯಲಿದೆ. ಮಧ್ಯಾಹ್ನ 1-30 ಕ್ಕೆ ಅನ್ನ ಸಂತರೆ್ಣ ಕಾರ್ಯಕ್ರಮವಿದ್ದು, ಸರ್ವ ಸಮಾಜದ ಭಕ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೋಪರ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 