ನೇಹಾ ಹಿರೇಮಠ ಹತ್ಯೆ: ಆರೋಪಿಗೆ ಕಠಿಣ ಶಿಕ್ಷೆ ನೀಡಲು ಮನವಿ

ರಾಣಿಬೆನ್ನೂರ 23: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹ ಹಿರೇಮಠ ಅವಳನ್ನು ಬರ್ಭರವಾಗಿ ಹತ್ಯಗೈದಿರುವ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ, ಸೋಮವಾರ ಎಬಿವಿಪಿ ವಿದ್ಯಾರ್ಥಿಗಳು ನಗರದ ಬಸ್ ನಿಲ್ದಾಣದ ಎದುರು ಮಾನವ ಸರಪಳಿ ನಿರ್ಮಿಸಿ ರಸ್ತೆ ಬಂದ ಮಾಡಿ ಪ್ರತಿಭಟನೆ ನಡೆಸಿದರು. 

ಕಾಲೇಜಿನಲ್ಲಿ ಒಳಗಡೆಯೇ ವಿದ್ಯಾರ್ಥಿನಿ ನೇಹ ಹಿರೇಮಠ ಅವಳನ್ನು ಬರ್ಭರವಾಗಿ ಹತ್ಯಗೈದಿರುವ ಆರೋಪಿಗೆ ಕಾನೂನಿನ ಭಯವೇ ಇಲ್ಲ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಾಜ್ಯದ ಪ್ರತಿಯೊಂದು ಕಾಲೇಜಿನಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ ನಿಯೋಜಿಸಬೇಕು. ಆರೋಪಿಗೆ ಕಠಿಣ ಶಿಕ್ಷೆ ನೀಡಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು. 

ಎಬಿವಿಪಿ ಕಾರ್ಯಕರ್ತರಾದ ನಾಗರಾಜ ಪೂಜಾರ, ಶಿವರಾಜ ದೊಳ್ಳಿನ, ಸುರೇಶ ಹಳ್ಳಿ, ಅಭಿಷೇಕ್, ಅನೀಲ ಸೊಪ್ಪಿನ, ನಾಗರಾಜ ಸೇರಿದಂತೆ ವಿವಿಧ ಕಾಲೇಜ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಇದ್ದರು.