ನವರಾತ್ರಿ ಉತ್ಸವ ನಿಮಿತ್ಯ ಘಟಸ್ಥಾಪನೆ ಕಾರ್ಯಕ್ರಮ
Navaratri festival inauguration program
ಯರಗಟ್ಟಿ, 23 : ನಾಡ ಹಬ್ಬ ದಸರಾ, ನವರಾತ್ರಿ ಉತ್ಸವ ನಿಮಿತ್ಯ ಪಟ್ಟಣದ ಗ್ರಾಮದೇವಿಯರ, ಕಾಳಿಕಾದೇವಿ, ವೀರಭದ್ರೇಶ್ವರ, ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಹಾಗೂ ರಾಜರಾಜೇಶ್ವರಿ ಆಶ್ರಮದಲ್ಲಿ ಭಾನುವಾರ ಧಾರ್ಮಿಕ ಪರಂಪರೆಯಂತೆ ಘಟಸ್ಥಾಪನೆ ಕಾರ್ಯಕ್ರಮ ನಡೆಯಿತು.
ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಸಂಜೆಯ ವರೆಗೂ ದೇವಿಗೆ ಕಾಕಡಾರತಿ, ಕ್ಷೀರಾಭಿಷೇಕ, ಜಲಾಭಿಷೇಕ, ಕುಂಕುಮಾರ್ಚನೆ ಅನೇಕ ಬಗೆಯ ಪೂಜಾ ಕಾರ್ಯಕ್ರಮಗಳು ನೆರವೇರಿಸಿದ ಬಳಿಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಪ್ರವಚನಕಾರ ಮಡಿವಾಳಪ್ಪ ವನ್ನೂರ ಹಾಗೂ ತುರುಮರಿಯ ಪೂಜ್ಯ ಶಾಂತಯ್ಯ ಮಹಸ್ವಾಮಿಗಳು ಇವರಿಂದ ದೇವಿ ಪಾರಾಯಣ ಜರುಗಿತು. ಬಳಿಕ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಗೆ ನೈವೇದ್ಯ ಅರ್ಿಸಿ ದರ್ಶನ ಪಡೆದರು.
ಕಾರ್ಯಕ್ರಮಕ್ಕೂ ಮುನ್ನ ದೇವಸ್ಥಾನದ ಆವರಣದಲ್ಲಿ ಮುತ್ತೈದೆಯರಿಗೆ ಪೂಜೆ ಸಲ್ಲಿಸಲಾಯಿತು. ಪೂಜ್ಯ ಗಣಪತಿ ಮಹಾರಾಜರು, ಎ. ಜಿ. ಪತ್ತಾರ, ಡಾ. ಕಾಶೀನಾತ ಅಂಗಡಿ, ವಿ. ಎಮ್. ಮರಡಿ, ಶಿವಾನಂದ ಹಂಜಿ, ಸುಭಾಸ ರೊಗೆ, ಡಾ. ವಿಶ್ವಾನಾಥ ತಾಂವಶಿ, ಮಹಾದೇವ ದಂಡಿನದುರ್ಗಿ, ಬಿ. ಕೆ. ರಂಗಣ್ಣವರ, ವಾಯ್. ಎಮ್. ಕಡಕೋಳ, ರಾಜೇಂದ್ರ ಶೆಟ್ಟಿ, ವಿಶ್ವಾನಾಥ ಹೊಳಿಮಠ, ಆಶಾ ಪರೀಟ, ಶೋಭಾ ದಂಡಿನದುರ್ಗಿ, ಮೈತ್ರಾ ಹೊಂಗಲ, ಮುಖಂಡರು ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 