ವಿನೂತನ ಯೋಜನೆಗಳಿಂದ ಮುಧೋಳ ಕ್ರಾಂತಿ: ನಾರನಗೌಡ ಉತ್ತಂಗಿ
Mudhol revolution due to innovative projects: Narana Gowda Utthangi
ಮಹಾಲಿಂಗಪುರ 14: ಕ್ಷೇತ್ರಶಿಕ್ಷಣಾಧಿಕಾರಿ ಎಸ್.ಎಂ.ಮುಲ್ಲಾ ಅವರ ವಿನೂತನ ಯೋಜನೆಗಳಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮುಧೋಳ ತಾಲೂಕು ದೊಡ್ಡ ಕ್ರಾಂತಿಯನ್ನೇ ಮಾಡಿದ್ದು ಕಳೆದ ವರ್ಷ ಸರ್ಕಾರಿ ಶಾಲೆಯ ಅಂಕಿತಾ ರಾಜ್ಯಕ್ಕೆ ನಂ.ಒನ್ ಸ್ಥಾನ ಗಳಿಸಿರುವುದು ತಾಲೂಕಿನ ಪ್ರತಿ ವಿದ್ಯಾರ್ಥಿಗೆ ದೊಡ್ಡ ಬಲ ತಂದಿದೆ ಎಂದು ಪತ್ರಕರ್ತ ನಾರನಗೌಡ ಉತ್ತಂಗಿ ಹೇಳಿದರು.
ಸ್ಥಳೀಯ ಸರ್ಕಾರಿ ಪ್ರೌಢ ಶಾಲೆಯ 10ನೇ ತರಗಲಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಸ್ನೇಹ ಸಮ್ಮೇಳನದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳು ಧರ್ಮಸ್ಥಳಗಳಿದ್ದಂತೆ, ಅಲ್ಲಿನ ಶಿಕ್ಷಕರು ಕಾಮಧೇನು, ಕಲ್ಪವೃಕ್ಷವಿದ್ದಂತೆ. ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಿ, ಫಲಿತಾಂಶದಿಂದ ಹೆತ್ತವರು, ಸಮಾಜ, ಶಾಲೆಯ ಋಣ ತೀರಿಸಿ ಎಂದರು.
ಶಿಕ್ಷಕಿ ಪದ್ಮಜಾ ಕಾನ್ವೇಕರ್ ಮಾತನಾಡಿ, ಹಗಲುಗನಸುಗಳಲ್ಲಿ ಕಳೆದು ಹೋಗಬೇಡಿ, ತಪಸ್ಸಿನಂತೆ ವಿದ್ಯಾಭ್ಯಾಸ ಮಾಡಿ ಸಾಧಿಸಿ ಎಂದರು.
ವಿದ್ಯಾರ್ಥಿಗಳಾದ ಸಾಕ್ಷಿ ಗೆದ್ದಪ್ಪನವರ, ಶಿವಲೀಲಾ ರಾವಳ, ಆದಿತ್ಯಾ ಭೋಸಲೆ, ಕೌಶಲ್ಯ ಮಮದಾಪುರ, ಆಸಿಯಾ ಐನಾಪುರ, ರಾಜಮಾಬಿ ಬುಡ್ಡೆಬಾಯಿ ಅನಿಸಿಕೆ ಹಂಚಿಕೊಂಡರು. ಕಳೆದ ಸಾಲಿನ ಎಸ್ಎಸ್ಎಲ್ಸಿ ಸಾಧಕರಾದ ಮಹಾಲಿಂಗ ಕಿಡದಾಳ, ಪ್ರೀತಿ ಮೇಟಿ, ಹನಮಂತ ದಂಡಿನ ಮತ್ತು ವಿವಿಧ ಚಟುವಟಿಕೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ನಗದು ವಿತರಿಸಲಾಯಿತು.
ಶಿವಲೀಲಾ ರಾವಳ ಮತ್ತು ಆದಿತ್ಯ ಭೋಸಲೆಗೆ ಆದರ್ಶ ವಿದ್ಯಾರ್ಥಿ ಪ್ರಶಸ್ತಿ ನೀಡಲಾಯಿತು.
ಎಸ್ಡಿಎಂಸಿ ಅಧ್ಯಕ್ಷ ಸಂಜಯ ರಾಠೋಡ ಉದ್ಘಾಟಿಸಿದರು. ಶಿಕ್ಷಕರಾದ ನೀಲಮ್ಮ ಬೆಟಗೇರಿ, ರಾಜೇಶ್ವರಿ ಬೀಳಗಿ, ರಾಜೇಶ್ವರಿ ಜಾಲಿಗಿಡದ, ಎಸ್.ಎಲ್.ಕಂಬಾರ, ಪಿ.ಸಿ.ಪಕ್ಕೀರನ್ನವರ, ಎಂ.ಎಸ್.ಮಲಾಬದಿ, ಜಿ.ಎಂ.ಅಂಗಡಿ, ರೇಣುಕಾ ಕರಿಗಾರ, ಶಾಂಭವಿ ಬಡಿಗೇರ, ಜ್ಯೋತಿ ಕಾಪಸೆ, ವಿದ್ಯಾಧರ ಗುಡ್ಲಮನಿ, ರಮೇಶ ಕಂಬಾರ ಇತರರಿದ್ದರು.
ಶಿಕ್ಷಕ ಗುರು ಅಂಗಡಿ ಸ್ವಾಗತಿಸಿ, ಶಿಕ್ಷಕಿ ಎಂ.ಜಿ.ಅಲ್ಲಾಖಾನ್ ನಿರೂಪಿಸಿದರು.
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ 