ಮುದ್ದೇಬಿಹಾಳ: ಮರ ಬಿದ್ದು ಸಂಚಾರಕ್ಕೆ ಅಡ್ಡಿ , ಬೈಕ್ ಮೇಲಿದ್ದ ದಂಪತಿ ಪಾರು
ಮುದ್ದೇಬಿಹಾಳ 03: ಪಟ್ಟಣದ ವಿಜಯಪುರ ರಸ್ತೆಯಲ್ಲಿ (ಅಂಜುಮನ್ ಶಾಲೆಯ ಎದುರು) ಇದ್ದ ಗುಲ್ಲಮೋಹರ್ ಮರವೊಂದು ಹಠಾತ್ ಧರೆಗುರಳಿದ ಘಟನೆ ಸೋಮವಾರ ಸಂಜೆ ನಡೆಯಿತು. ಘಟನೆಯಲ್ಲಿ ಅದೇ ರಸ್ತೆಯಲ್ಲಿ ಬೈಕ್ ಮೇಲೆ ಹೋಗುತ್ತಿದ್ದ ಕುಂಬಾರ ಎನ್ನುವ ದಂಪತಿ ಮೇಲೆ ಬಿದ್ದಿತಾದರೂ ಅದೃಷ್ಟವಶಾತ್ ಅವರಿಗೆ ಸಣ್ಣಪುಟ್ಟ ಗಾಯಗಳಾದವು. ಆದರೆ ಮರ ಅಲ್ಲಿಯೇ ಇದ್ದ ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದರಿಂದ ಭಾರೀ ಅನಾಹುತವಾಗುವ ಸಾಧ್ಯತೆ ಇತ್ತು. ಅದೇ ರಸ್ತೆಯಲ್ಲಿ ಹೊರಟಿದ್ದ ಢವಳಗಿಯ ವಿನೋದಗೌಡ ಕೊಣ್ಣೂರ ಕೂಡಲೇ ಹೆಸ್ಕಾಂ ಅಧಿಕಾರಿ ಬಿ.ಎಸ್.ಯಲಗೋಡ ಅವರನ್ನು ಸಂಪರ್ಕಿಸಿ, ವಿದ್ಯುತ್ ಪ್ರಸರಣ ನಿಲ್ಲುವಂತೆ ಮಾಡಿದರು. ನಂತರ ಅಲ್ಲಿದ್ದ ಗ್ಯಾರೇಜ್ ಮಾಲೀಕ ಶಬ್ಬೀರ ಮತ್ತಿತರರು ಬೈಕ್ ಮೇಲಿದ್ದ ಕುಂಬಾರ ದಂಪತಿಗಳನ್ನು ಉಪಚರಿಸಿ ಕಳಿಸಿದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 