ಕಾರ್ಯಕರ್ತರ ಆಗಮನದಿಂದ ಬಿಜೆಪಿ ಪಕ್ಷಕ್ಕೆ ಮತ್ತಷ್ಟು ಬಲ: ಶಾಸಕಿ ಜೊಲ್ಲೆ

ನೂರಕ್ಕೂ ಅಧಿಕ ಕಾರ್ಯಕರ್ತರು ಬಿಜೆಪಿ ಸೇರ್ಪಡೆ

ಚಿಕ್ಕೋಡಿ 22: ಪ್ರಧಾನಿ ನರೇಂದ್ರ ಮೋದಿ ಅವರ  ಬಿಜೆಪಿ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ 8810 ಅಧಿಕ ಕೋಟಿಯ ಅಧಿಕ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ನಾಗರಮುನ್ನೋಳ್ಳಿ ಮತ್ತು ಕರೋಶಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ನೂರಾರು ಕಾರ್ಯಕರ್ತರು ಶಾಸಕಿ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದರು. 

ನಾಗರಮುನ್ನೊಳಿ ಗ್ರಾಮದ ಸಿದ್ದಪ್ಪ ಚೌಗಲಾ, ಬಸವರಾಜ ಯಾದಗುಡೆ, ಲಕ್ಷ್ಮಣ ಬಂಬಲವಾಡೆ, ಸತ್ಯಪ್ಪ ಜುಲಪೆ,  ಈರ​‍್ಪ ಚೌಗಲಾ ಮತ್ತು ಜೈನಾಪುರ ಗ್ರಾಮದ ದುಂಡಪ್ಪ  ಘರಬುಡೆ, ಈರಗೌಡ ಟೊಪುಗೊಳ, ರಾಜು ಭಾಕರೇ ರಾಮಗೌಂಡ ಸುಳಕುಡೆ, ಅಲಗೊಂಡ ಬ್ಯಾಳಿ, ರಾಜು ಮಠದ, ಅರ್ಜುನ ಕಮತೆ ಹಾಗೂ ಅವರ ತಂಡದ ನೂರಕ್ಕೂ ಅಧಿಕ ಸದಸ್ಯರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರೆ​‍್ಡಗೊಂಡಿದ್ದು, ಅವರನ್ನು ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಶಾಸಕಿ  ಶಶಿಕಲಾ ಜೊಲ್ಲೆ  ಯವರು ಆತ್ಮೀಯವಾಗಿ ತಮ್ಮ ಪಕ್ಷಕ್ಕೆ ಬರಮಾಡಿಕೊಂಡರು. 

ಧುರೀಣ ಅರುಣ ಐಹೊಳೆ, ವಿಜಯ ಕೋಠಿವಾಲೆ, ರಾಯಗೌಡ ಕೆಳಗಿನಮನಿ, ರವಿ ಹಿರೇಕೊಡಿ, ಅಪ್ಪಾಸಾಹೇಬ ಖೇಮಲಾಪೂರೆ, ಪ್ರಥ್ವಿರಾಜ ಜಾಧವ ಮುಂತಾದವರು ಇದ್ದರು.