ಇಂದು ಮಾದರ ಮಹಾಸಭಾ ವತಿಯಿಂದ ಸದಸ್ಯತ್ವ ನೊಂದಣಿ ಸಭೆ
Membership registration meeting by Madara Mahasabha today
ಪಾಲಬಾವಿ 08: ರಾಯಭಾಗ ಪಟ್ಟಣದ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಮುಂಜಾನೆ 10:30ಕ್ಕೆ ಕರ್ನಾಟಕ ಮಾದಾರ ಮಹಾಸಭಾ (ರಿ) ಇವರ ಅಡಿಯಲ್ಲಿ ಕರ್ನಾಟಕ ಮಾದರ ಮಹಾಸಭಾ ಸದಸ್ಯತ್ವ ನೋಂದಣಿಯ ಅಭಿಯಾನ ಕಾರ್ಯಕ್ರಮವು ಜರುಗಲಿದ್ದು ಕರ್ನಾಟಕ ರಾಜ್ಯದ ಮಾದಾರ ಮಹಾಸಭಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ ಐಹೊಳೆ ನೇತೃತ್ವವಹಿಸುವರು.
ಸಂಘಟನೆಯ ಜಿಲ್ಲಾ ಮುಖಂಡರಾದ ಲಕ್ಷ್ಮಣ ಲಗಮಪ್ಪಗೋಳ, ಬಸವರಾಜ ಅರವಳ್ಳಿ, ಮಹಾವೀರ ಐಹೊಳೆ ಮುಖ್ಯ ಅತಿಥಿಗಳಾಗಿ ಆಗಮಿಸುವುದು. ಚರ್ಚಿಸುವ ವಿಷಯಗಳು:- ತಾಲೂಕ ಪದಾಧಿಕಾರಿಗಳ ಆಯ್ಕೆ, ತಾಲೂಕಿನ ಮಾದಾರ ಸಮಾಜದ ಪ್ರತಿ ಮನೆ ಮನೆ ತೆರಳಿ ಸದಸ್ಯತ್ವದ ಅಭಿಯಾನದ ಅರಿವು ಮೂಡಿಸುವುದು, ಮಾದರ ಸಭಾ ಸಂಘಟನೆಗೆ ಸದಸ್ಯತ್ವ ಮಾಡಿಸುವುದು ಸೇರಿದಂತೆ ಅನೇಕ ವಿಷಯಗಳನ್ನು ಚರ್ಚಿಸುವುದಕ್ಕಾಗಿ ವಿಶೇಷ ಸಭೆಯನ್ನು ಕರೆಯಲಾಗಿದ್ದು, ಅದಕ್ಕಾಗಿ ತಾಲೂಕಿನ ಎಲ್ಲ ಮಾದರ ಸಮಾಜದ ಬಾಂಧವರು, ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಆಗಮಿಸಬೇಕೆಂದು ತಾಲೂಕು ಸಮಾಜದ ಮುಖಂಡ ಕಾಡೇಶ ಐಹೊಳೆ ಪ್ರಕಟಿನಲ್ಲಿ ತಿಳಿಸಿದ್ದಾರೆ.
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ 