ಆಮ್ ಆದ್ಮಿ ಪಕ್ಷದಿಂದ ಸದಸ್ಯತ್ವ ಅಭಿಯಾನ


ಕನಕಗಿರಿ 16: ತಾಲೂಕಿನ ವಿಧಾನಸಭಾ ಕ್ಷೇತ್ರದ ಕಾರ್ಯಾಲಯದಲ್ಲಿ ಸದಸ್ಯತ್ವದ ಅಭಿಯಾನ ಚರ್ಚೆ ನಡೆಯಿತು. 50 ಕಡೆ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಮಾಡುವುದಾಗಿ ತೀರ್ಮಾನ ತೆಗೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ಹುಸೇನ್ ಸಾಬ್ ಗಂಗನಾಳ  ಕನಕಗಿರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ರಮೇಶ್ ಕೋಟೆ, ಅಲ್ಪಸಂಖ್ಯಾತರ ಅಧ್ಯಕ್ಷರಾದ ಅಮ್ಜದ್ ಖಾನ್ ರೈತ ಘಟಕದ ಅಧ್ಯಕ್ಷರಾದ ಆನಂದ ಬಾಬು, ರೈತ ಘಟಕದ ಸಂಘಟನೆ ಕಾರ್ಯದರ್ಶಿಯಾದ ತಿರುಪತಿ, ಕಾರ್ಮಿಕ ಘಟಕದ ಅಧ್ಯಕ್ಷರಾದ ಲಿಂಗರಾಜ್ ಹೂಗಾರ್,ಕಾರ್ಮಿಕ ಘಟಕದ ಸಂಘಟನೆ ಕಾರ್ಯದರ್ಶಿಯಾದ ವೀರೇಶ್, ಗಂಗಾವತಿ ಗ್ರಾಮೀಣ ಘಟಕದ ಸಂಘಟನೆ ಕಾರ್ಯದರ್ಶಿಯಾದ ಭೋಗೇಶ್, ಅಸ್ಲಾಂ,ಸೋಮಶೇಖರ್, ಅಕ್ಬರ್,ಮುಂತಾದವರು ಭಾಗವಹಿಸಿದ್ದರು.