ಧ್ಯಾನದಿಂದ ಕಾಯಿಲೆಗಳು ದೂರ
Meditation keeps diseases away
ಹನಮಸಾಗರ 11: ಅನಾಪಾನ ಧ್ಯಾನದಿಂದ ನಾವು ಎಲ್ಲವನ್ನು ಪಡೆಯಬಹುದು ಎಂದು ಬೆಂಗಳೂರಿನ ಮಾಸ್ಟರ್ ಲಲಿತಾ ಪವಾರ ಹೇಳಿದರು.
ಗ್ರಾಮದ ಶ್ರೀ ಕರಿಸಿದ್ದೇಶ್ವರ ಬಸವ ಮಂಟಪದಲ್ಲಿ ಸೋಮವಾರ ಸಂಜೆ ಮಂಡಲ ಸಂಕಲ್ಪ ಧ್ಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾನಸಿಕ ನೆಮ್ಮದಿಗೆ ಇದು ಅದ್ಭುತವಾಗಿ ಕೆಲಸ ಮಾಡುತ್ತದೆ. ಮಧುಮೇಹ, ಬಿಪಿಯಿಂದ ಬಳಲುವಂತಹವರು ಈ ಧ್ಯಾನದಿಂದ ಕೆಲವೇ ದಿನಗಳಲ್ಲಿ ಯತಾಸ್ಥಿತಿಗೆ ಬರುತ್ತಾರೆ. ಇದನ್ನು ಎಲ್ಲಿಯಾದರೂ, ಸುಖಾಸನದಿಂದ ಕುಳಿತುಕೊಂಡು ಮಾಡಬಹುದಾಗಿದೆ. ಸಹಜವಾದ ಉಸಿರಾಟವನ್ನು ಗಮನಿಸುತ್ತಾ ಹೊಗಬೇಕು.
ಧ್ಯಾನ ಎಂದರೆ ಉಸಿರಾಟದ ಮೇಲೆ ಗಮನ, ಒಂದು ದಿವಸ ಬಿಡದೆ ಮಾಡಬೇಕು ಇದರಿಂದ ನಮಗೆ ಬ್ರಹ್ಮಾಂಡದ ವಿಶ್ವಶಕ್ತಿ ನಮಗೆ ಸಿಗುತ್ತದೆ. ಇದೇ ಮಾ.16 ರಂದು ಶ್ರೀ ಕರಿಸಿದ್ದೇಶ್ವರ ಬಸವ ಮಂಟಪದಲ್ಲಿ ಉಚಿತವಾಗಿ ಧ್ಯಾನ ಮಹಾಯಜ್ಞ ಹಮ್ಮಿಕೊಳ್ಳಲಾಗಿದೆ. ತಪ್ಪಿಸದೆ ಎಲ್ಲರೂ ಆಗಮಿಸಿ ಸದುಪಯೋಗ ಪಡೆದುಕೊಳ್ಳ ಎಂದರು.
ಇದೇ ವೇಳೆ ಪತ್ರಿಕಟ್ಟಿ ಬಸವೇಶ್ವರ ತರುಣ ಸಂಘ, ನಿಸರ್ಗ ಸಂಗೀತ ವಿದ್ಯಾಲಯ ಸಂಘ, ಡಾ.ಪುಟ್ಟರಾಜ ಗಾನಯೋಗಿ ಭಜನಾ ಸಂಘ, ಮಂಜುನಾಥ ಗ್ರಾಮೀಣಾಭಿವೃದ್ಧಿ ಸಂಘ, ಅಕ್ಕಮಾಹಾದೇವಿ ಬಳಗ ಸೇರಿದಂತೆ ನಾನಾ ಸಂಘದವರು ಭಾಗಿಯಾಗಿದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 