ದಿ. 23ರಂದು ಮಲ್ಲಿಕಾರ್ಜುನ ರಥೋತ್ಸವ

ಯರಗಟ್ಟಿ 22: ಸಮೀಪದ ಸತ್ತಿಗೇರಿ ಭಾಗದ ಆರಾಧ್ಯ ದೈವ ಮಲ್ಲಿಕಾರ್ಜುನ ರಥೋತ್ಸವ ದಿ. 23ರಂದು ವಿಜೃಂಭಣೆಯಿಂದ ಜರುಗಲಿದೆ. ಎರಡನೇ ಶ್ರೀಶೈಲ ಕ್ಷೇತ್ರವೆಂದೇ  ಶ್ರೀಮಲ್ಲಿಕಾರ್ಜುನ ದೇವಸ್ಥಾನ ಪ್ರಖ್ಯಾತಿ ಪಡೆದಿದ್ದು, ಈ ಜಾತ್ರಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆಯುತ್ತಾರೆ. 

ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಜರುಗುವ ರಥೋತ್ಸವದ ನಿಮಿತ್ತ ಮಂಗಳವಾರ ನಾನಾ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಎ23ರಂದು ಬೆಳಗ್ಗೆ ಅಭಿಷೇಕ, ಪೂಜೆ, ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪೂಜಾಕಾರ್ಯಗಳು ನೆರವೇರಲಿವೆ. ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.