ದಾನ ಮಾಡುವುದನ್ನು ರೂಢಿಸಿಕೊಳ್ಳಿ: ಖಾಜಿ
ಲೋಕದರ್ಶನ ವರದಿ
ಯಲಬುಗರ್ಾ 21: ಹುಟ್ಟಿದ ಮನುಷ್ಯ ಮುಂದೊಂದು ದಿನ ಸಾಯಲೇಬೇಕು ಆಗ ನಮ್ಮಲ್ಲಿರುವದನ್ನು ನಾವು ಏನನ್ನು ಹೊಯ್ಯುವದಿಲ್ಲಾ ಆದ್ದರಿಂದ ಮನುಷ್ಯ ದಾನ ಮಾಡುವ ಗುಣಗಳನ್ನ ಬೆಳೆಸಿಕೊಳ್ಳಬೇಕು ಎಂದು ಪಪಂ ಸದಸ್ಯ ರೀಯಾಜ್ ಮೊಹಮ್ಮದ್ ಖಾಜಿ ಹೇಳಿದರು.
ಪ್ರವಾದಿ ಮೊಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ಪ್ರಯುಕ್ತ ನಗರದ ನೂರು ಹಾಸಿಗೆ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಾಲು ಹಣ್ಣು ವಿತರಿಸಿ ಅವರು ಮಾತನಾಡಿದರು.
ಧಾನ ಧರ್ಮದ ಬಗ್ಗೆ ಪ್ರವಾದಿಗಳು ಸಾಕಷ್ಟು ಮಾಹಿತಿಗಳನ್ನ ನಮಗೆ ತಿಳಿಸಿಕೊಟ್ಟಿದ್ದಾರೆ ಅದರಂತೆ ನಾವು ನಡೆಯಬೇಕಿದೆ ದಾನ ಮಾಡುವದರಲ್ಲಿ ಸಿಗುವ ಸುಖ ಮತ್ತೆಲ್ಲೂ ಸಿಗುವದಿಲ್ಲಾ ಯಾಕೆಂದರೆ ಜಗತ್ತಿನಲ್ಲಿ ಎಲ್ಲರು ಎಲ್ಲವನ್ನು ಪಡೆದುಕೊಂಡು ಬಂದಿರುವದಿಲ್ಲಾ ಬಡಜನತೆಗೆ ನಮಗೆ ಸಾದ್ಯವಾದಷ್ಟು ಸಹಾಯ ಮಾಡಬೇಕು ಅಂದಾಗ ನಮ್ಮ ಜೀವನ ಸಾರ್ಥಕತೆ ಕಾಣುತ್ತದೆ ಎಂದರು.
ಪಪಂ ಸದಸ್ಯ ಅಶೋಕ ಅರಕೇರಿ, ಮುಖಂಡರಾದ,ಶ್ಯಾಮೀದಸಾಬ ಆನೆಗುಂದಿ, ಶರೀಪ್ ಕೊತ್ವಾಲ್, ಮತರ್ುಜಸಾಬ ಬೂದಿ, ಸಲೀಂ ನಿಲಗಾರ, ರೇಹಮಾನ್ ರೆವಡಿಹಾಳ, ಮೈಬೂ ಕೊಪ್ಪಳ, ರಾಜಸಾಬ ದಫೆದಾರ, ಜಿಂದಗಿಸಾಬ ಮಣಿಗಾರ, ಇಮಾಮಸಾಬ ಕೊತ್ವಾಲ್ ಸೇರಿದಂತೆ ಇನ್ನೀತರರು ಹಾಜರಿದ್ದರು.
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ
ಕ್ಷುಲ್ಲಕ ಕಾರಣಕ್ಕೆ ಪಿಕಾಸಿಯಿಂದ ವ್ಯಕ್ತಿಯ ಹತ್ಯೆ : ಖಾನಾಪೂರ ತಾಲೂಕಿನಲ್ಲಿ ಘಟನೆ
ಟ್ರಂಪ್ ನೌಕಾ ದಿಗ್ಬಂಧನ ಕ್ರಮ ಘೋಷಣೆ; ಇರಾನ್ ಮೇಲೆ ಅಮೆರಿಕದ ಮೂರನೇ ರಾತ್ರಿ ದಾಳಿ
ಹೆಚ್ಚಿನ ಬಡ್ಡಿ ಆಮಿಷ, 25.79 ಕೋಟಿ ವಂಚನೆ: ಮುಖ್ಯ ಆರೋಪಿ ಬಂಧನ: ನೊಂದವರು ಮಾಳಮಾರುತಿ ಠಾಣೆಗೆ ಸಂಪರ್ಕಿಸಿ
ಶ್ರೀಮುರಳಿ ಅಭಿನಯದ ‘ಪರಾಕ್’ ಟೀಸರ್ ಬಿಡುಗಡೆ; ಭರ್ಜರಿ ಆ್ಯಕ್ಷನ್ ಮತ್ತು ತೀವ್ರ ಕಥಾಹಂದರದ ಸುಳಿವು 