ಮಹಾವೀರ ಜಯಂತಿ ಕಾರ್ಯಕ್ರಮ
Mahavir Jayanti program
ಲೋಕದರ್ಶನ ವರದಿ
ಜಮಖಂಡಿ 02: ಜೈನ ಧರ್ಮದ 24ನೇ ತೀಥಂರ್ಕರರಾದ ಮಹಾವೀರರು ಅಹಿಂಸೆ ಮತ್ತು ಸತ್ಯದ ಮಾರ್ಗವನ್ನು ಬೋಧಿಸಿದವರು ಅವರು ಬದುಕು ಮತ್ತು ಬದುಕಲು ಬಿಡು ಎಂಬ ಸರ್ವಕಾಲಿಕ ಸಂದೇಶವನ್ನು ಸಾರಿದರು ಎಂದು ತಹಸೀಲ್ದಾರ ಅನೀಲ ಬಡಿಗೇರ ಹೇಳಿದರು.
ನಗರದ ತಾಲೂಕಾಡಳಿತ ಸಭಾ ಭವನದಲ್ಲಿ ನಡೆದ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಾವೀರರು ತಮ್ಮ ಜೀವನ ಕಾಲದ 30ನೇ ವಯಸ್ಸಿನಲ್ಲಿ ಸಂಸಾರ ಮತ್ತು ರಾಜ್ಯವನ್ನು ತ್ಯಜಿಸಿ ಸನ್ಯಾಸಿಯಾದರು. ಸುಮಾರು 12 ವರ್ಷಗಳ ಕಾಲ ತಪಸ್ಸು ಆಚರಿಸಿ ಕೈವಲ್ಯ ಜ್ಞಾನ ಪಡೆದರು. ಅವರ ತೋರಿಸಿದ ಮಾರ್ಗದಲ್ಲಿ ನಡೆದು ಜೀವನ ಸಾರ್ಥಕ ಮಾಡಿಕೊಳ್ಳಬೇಕು ಅಹಿಂಸಾ ಪರಮೋಧರ್ಮ ಎಂಬಂತೆ ಎಲ್ಲ ಪ್ರಾಣಿಗಳ ಮೇಲೆ ದಯೆ ಇರಬೇಕು ಎಂದರು.
ಸಮಾಜದ ಮುಖಂಡ ವರ್ಧಮಾನ ಮಹಾವೀರರ ಕುರಿತು ಮಾತನಾಡಿ, ಮೋಕ್ಷ ಪಡೆಯಲು ಸಮ್ಯಕ ದರ್ಶನ, ಜ್ಞಾನ, ಚಾರಿತ್ಯ್ರ ಹೊಂದಿರಬೇಕೆಂಬ ತತ್ವವನ್ನು ಬೋದಿಸಿದರು. ಅವರು ತೋರಿಸಿದ ಮಾರ್ಗದಲ್ಲಿ ನಡೆದು ಜೀವನ ಸಾರ್ಥಕ ಪಡಿಸಿಕೊಳ್ಳ ಬೇಕು ಎಂದರು.
ಮುಖಂಡ ದಯಾನಂದ ಶಿರಗಾರ, ರಾಜು ಕಡೊಲಿ, ಪಿ.ಪಿ.ನಂದಗಾಂವ, ವರ್ಧಮಾನ ಯಲಗುದ್ರಿ, ಚಂದ್ರಗುಪ್ತ ಬೆಳಗಲಿ, ಸುರೇಶ ನ್ಯಾಮಗೌಡ, ಮಯೂರ ಓಸ್ವಾಲ, ಆರ್.ಪಿ.ನ್ಯಾಮಗೌಡ, ಪದ್ದು ಅಕ್ಕಿವಾಟ, ಭರತೇಶ ಪಾಟೀಲ, ಸೀತಲ ನ್ಯಾಮಗೌಡ, ಬಸವರಾಜ ಆಲಗೂರ, ವಿನಯ ಸೇರಿದಂತೆ ಅನೇಕರು ಇದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 