ಮಹಾರಾಣಾ ಶಿಕ್ಷಣ ಸಂಸ್ಥೆಯಲ್ಲಿ ದಿ: ಕೆ.ಎಚ್.ಪಾಟೀಲರ 101 ನೇ ಜಯಂತಿ ಆಚರಣೆ
Maharana Educational Institution: K.H. Patil's 101st birth anniversary celebration
ಲೋಕದರ್ಶನ ವರದಿ
ಬೆಟಗೇರಿ 16: ಇಂದು ನಗರದ ಮಹಾರಾಣಾ ಪ್ರತಾಪಸಿಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಮ್ಮ ಶಿಕ್ಷಣ ಸಂಸ್ಥೆಯ ಸ್ಪೂರ್ತಿಗಳು ಹಾಗೂ ಬೆನ್ನೆಲುಬಾದ ದಿ: ಕೆ.ಎಚ್.ಪಾಟೀಲರ 101 ನೇ ಜಯಂತಿಯನ್ನು ಏರಿ್ಡಸಲಾಗಿತ್ತು. ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಗಣೇಶಸಿಂಗ ಬ್ಯಾಳಿ ಇವರು ಆಗಮಿಸಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಾರೆ್ಪಣ ಮಾಡಿ ಮಾತನಾಡುತ್ತ ದಿ: ಕೆ.ಎಚ್.ಪಾಟೀಲರಲ್ಲಿದ್ದ, ಛಲ,ಧೈರ್ಯ, ಸಾಮಾಜಿಕ ಕಾಳಜಿ, ಬಡವರಲ್ಲಿದ್ದ ಪ್ರೀತಿ ಇವೆಲ್ಲವು ಅವಿಸ್ಮರಣೀಯ. ಧೀಮಂತ ನಾಯಕರಾದ ಇವರು ಹುಲಕೋಟಿ ಹುಲಿ ಎಂದೇ ಪ್ರಸಿದ್ಧರಾಗಿದ್ದರು. ಇವರು ನಮ್ಮ ಶಿಕ್ಷಣ ಸಂಸ್ಥೆಯ ಬೆನ್ನೆಲುಬಾಗಿದ್ದರು. ಇವರು ಸಹಕಾರಿ ಕ್ಷೇತ್ರ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ರಾಜಕೀಯ ಕ್ಷೇತ್ರಕ್ಕೆ ದಾರಿ ದೀಪವಾಗಿದೆ. ಇವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರು ಎಲ್ಲರ ಮನಸ್ಸಿನಲ್ಲಿ ಇದ್ದಾರೆಂದು ನುಡಿದರು. ಈ ಸಂದರ್ಭದಲ್ಲಿ ಪ್ರಭಾರ ಮುಖ್ಯಾಧ್ಯಾಪಕರಾದ ಎಚ್.ಎಸ್.ಬ್ಯಾಳಿ, ಸಮಸ್ತ ಸಿಬ್ಬಂದಿ ಹಾಗೂ ವಿದ್ಯಾರ್ಥಿವೃಂದ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 