ತ್ರಿವರ್ಣ ಸೀರೆಯ ಮಹಾಲಕ್ಷ್ಮೀಯ ಪೂಜೆ
Mahalakshmi Puja in Tricolor Saree
ಜಮಖಂಡಿ : 27-2 ತಾಲೂಕಿನ ಮುತ್ತೂರು ಗ್ರಾಮದ ಅಧಿದೇವತೆ ಮಹಾಲಕ್ಷ್ಮೀಯನ್ನು ಗಣರಾಜ್ಯೋತ್ಸವದ ಪ್ರಯುಕ್ತ ತ್ರಿವರ್ಣ ಸೀರೆಯ ಅಲಂಕಾರದೊಂದಿಗೆ ಪೂಜಿಸಲಾಗಿತ್ತು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಮದ ಆಕ್ಷಫರ್ಡ್ ವಿಜ್ಞಾನ ಪಿಯು ಕಾಲೇಜಿನ ಆಡಳಿತಾಧಿಕಾರಿ ಹಾಗೂ ದೇವಿಯ ಭಕ್ತರಾಗಿರುವ ಅಮೀತಗೌಡ ಪಾಟೀಲ ಅವರು ಕಳೆದ 3 ವರ್ಷಗಳಿಂದ ಆಗಸ್ಟ 15 ಹಾಗೂ ಜನೇವರಿ 26ಕ್ಕೆ ಶ್ರೀದೇವಿಗೆ ತ್ರಿವರ್ಣ ಧ್ವಜದ ಅಲಂಕಾರ ಮಾಡಿಸಿ ವಿಶೇಷ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ.
ಭಕ್ತರ ಕೋರಿಕೆಯಂತೆ ದೇವಿಯನ್ನು ತ್ರಿವರ್ಣ ಸೀರೆಯಿಂದ ಅಲಂಕರಿಸಲಾಗುತ್ತದೆ ಎಂದು ಅರ್ಚಕ ಸುರೇಶ್ ಆರ್,ಜಿ, ತಿಳಿಸಿದರು. ಶ್ರೀದೇವಿಯ ಅಲಂಕಾರ ವಿಶೇಷ ಪೂಜೆಗಳು ನಡೆದವು. ದೈವಿಭಕ್ತಿಯ ಜೊತೆಗೆ ದೇಶಭಕ್ತಿಯ ಅನನ್ಯ ಸಂಗಮವಾಗಿತ್ತು. ಇತಿಹಾಸ ಪರಂಪರೆ ಹೊಂದಿರುವ ಮುತ್ತೂರು ಮಹಾಲಕ್ಷ್ಮೀ ದೇವಿಗೆ ತ್ರಿವರ್ಣ ಧ್ವಜವನ್ನು ಹೋಲುವ ವಿಶೇಷ ಸೀರೆ ಅಲಂಕಾರದಲ್ಲಿ ಕಂಗೊಳಿಸಿದಳು. ದೇವಿಯಲ್ಲಿ ಭಾರತಾಂಬೆಯ ಪ್ರತಿರೂಪ ಕಾಣಲು ಭಕ್ತ ಸಾಗರವೇ ಹರಿದು ಬಂದಿತ್ತು. ವಿಶೇಷ ಪೂಜೆಗಳ ಕಾರ್ಯಕ್ರಮಗಳು ನಡೆದವು. ಅರ್ಚಕ ಹನುಮಂತ ಗುರುವ ತಂಡದವರು ದೇವರನ್ನು ಅಲಂಕರಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 