ತ್ರಿವರ್ಣ ಸೀರೆಯ ಮಹಾಲಕ್ಷ್ಮೀಯ ಪೂಜೆ
Mahalakshmi Puja in Tricolor Saree
ಜಮಖಂಡಿ : 27-2 ತಾಲೂಕಿನ ಮುತ್ತೂರು ಗ್ರಾಮದ ಅಧಿದೇವತೆ ಮಹಾಲಕ್ಷ್ಮೀಯನ್ನು ಗಣರಾಜ್ಯೋತ್ಸವದ ಪ್ರಯುಕ್ತ ತ್ರಿವರ್ಣ ಸೀರೆಯ ಅಲಂಕಾರದೊಂದಿಗೆ ಪೂಜಿಸಲಾಗಿತ್ತು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಮದ ಆಕ್ಷಫರ್ಡ್ ವಿಜ್ಞಾನ ಪಿಯು ಕಾಲೇಜಿನ ಆಡಳಿತಾಧಿಕಾರಿ ಹಾಗೂ ದೇವಿಯ ಭಕ್ತರಾಗಿರುವ ಅಮೀತಗೌಡ ಪಾಟೀಲ ಅವರು ಕಳೆದ 3 ವರ್ಷಗಳಿಂದ ಆಗಸ್ಟ 15 ಹಾಗೂ ಜನೇವರಿ 26ಕ್ಕೆ ಶ್ರೀದೇವಿಗೆ ತ್ರಿವರ್ಣ ಧ್ವಜದ ಅಲಂಕಾರ ಮಾಡಿಸಿ ವಿಶೇಷ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ.
ಭಕ್ತರ ಕೋರಿಕೆಯಂತೆ ದೇವಿಯನ್ನು ತ್ರಿವರ್ಣ ಸೀರೆಯಿಂದ ಅಲಂಕರಿಸಲಾಗುತ್ತದೆ ಎಂದು ಅರ್ಚಕ ಸುರೇಶ್ ಆರ್,ಜಿ, ತಿಳಿಸಿದರು. ಶ್ರೀದೇವಿಯ ಅಲಂಕಾರ ವಿಶೇಷ ಪೂಜೆಗಳು ನಡೆದವು. ದೈವಿಭಕ್ತಿಯ ಜೊತೆಗೆ ದೇಶಭಕ್ತಿಯ ಅನನ್ಯ ಸಂಗಮವಾಗಿತ್ತು. ಇತಿಹಾಸ ಪರಂಪರೆ ಹೊಂದಿರುವ ಮುತ್ತೂರು ಮಹಾಲಕ್ಷ್ಮೀ ದೇವಿಗೆ ತ್ರಿವರ್ಣ ಧ್ವಜವನ್ನು ಹೋಲುವ ವಿಶೇಷ ಸೀರೆ ಅಲಂಕಾರದಲ್ಲಿ ಕಂಗೊಳಿಸಿದಳು. ದೇವಿಯಲ್ಲಿ ಭಾರತಾಂಬೆಯ ಪ್ರತಿರೂಪ ಕಾಣಲು ಭಕ್ತ ಸಾಗರವೇ ಹರಿದು ಬಂದಿತ್ತು. ವಿಶೇಷ ಪೂಜೆಗಳ ಕಾರ್ಯಕ್ರಮಗಳು ನಡೆದವು. ಅರ್ಚಕ ಹನುಮಂತ ಗುರುವ ತಂಡದವರು ದೇವರನ್ನು ಅಲಂಕರಿಸಿದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 