ಪೆಟ್ರೋಲ್, ಅಡುಗೆ ಎಣ್ಣೆ ಮಿತವಾಗಿ ಬಳಸಿ ಪ್ರಧಾನಿ ಮೋದಿ ಹೇಳಿಕೆ ಸ್ವಾಗತಿಸಿದ ಸಂಸದ ಕಾಗೇರಿ
MP Kageri welcomes PM Modi's statement on using petrol and cooking oil in moderation
ಕಾರವಾರ 11: ಪೆಟ್ರೋಲ್ , ಡಿಸೆಲ್, ಅಡುಗೆ ಎಣ್ಣೆ ಮಿತವಾಗಿ ಬಳಸಿ ಎಂಬ ಪ್ರಧಾನಿ ಮೋದಿ ಹೇಳಿಕೆಯನ್ನು ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವಾಗತಿಸಿದರು. ಕಾರವಾರದಲ್ಲಿ ಸುದ್ದಿಗಾರರ ಜೊತೆ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವರು ಮಾತನಾಡಿದರು. ಪ್ರಧಾನಿ ಹೇಳಿದ್ದನ್ನು ಜನ ಸ್ವಾಗತಿಸಬೇಕು. ದೇಶದ ಹಿತ ದಿಂದ ಪ್ರಧಾನಿ ಮೋದಿ ಅವರು ಒಂದು ವರ್ಷ ಕಾಲ ಬಂಗಾರ ಖರೀದಿಸದಂತೆ ಹೇಳಿದ್ದಾರೆ. ಗ್ಯಾಸ್, ಕ್ರೂಡ್ ಆಯಿಲ್, ರಸಗೊಬ್ಬರ ಗಳಿಗೆ ನಾವು ವಿದೇಶಗಳನ್ನು ಅವಲಂಬಿತರಾಗಿದ್ದೇವೆ. ಈ ಅವಲಂಬನೆಯನ್ನು ಕಡಿಮೆ ಮಾಡಬೇಕೆಂದು ಮೋದಿ ಅವರು ಜನರಿಗೆ ಕರೆ ಕೊಟ್ಟಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ನರೇಂದ್ರ ಮೋದಿ ವಿಶ್ವನಾಯಕರಾಗಿರುವ ಕಾರಣ, ದೇಶದಲ್ಲಿ ಪೆಟ್ರೋಲ್, ಡಿಸೆಲ್, ಗ್ಯಾಸ್ ಸಿಗುತ್ತಿದೆ. ವಾಣಿಜ್ಯ ಸಿಲೆಂಡರ್ ದರ ಹೆಚ್ಚಾಗಿದೆ. ಆದರೂ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗಿದೆ. ಇಸ್ರೆಲ್ ಇರಾನ್ ಯುದ್ಧದ ಕಾರಣ ಸನ್ನಿವೇಶ ಗಂಭೀರ ವಾಗಿದೆ. ಬೇರೆ ದೇಶಗಳು ಲಾಕ್ ಡೌನ್ ಆಗಿದ್ದರೂ, ನಮ್ಮಲ್ಲಿ ಅಂತಹ ಸ್ಥಿತಿ ಇನ್ನೂ ಇಲ್ಲ ಎಂದು ಸಂಸದ ಕಾಗೇರಿ ಸಮರ್ಥನೆ ಮಾಡಿ ಕೊಂಡರು. ಪ್ರಧಾನ ಮಂತ್ರಿ ಮೋದಿ ಕರೋನ ಸಂದರ್ಭವನ್ನು ಹೇಗೆ ಎದುರಿಸಿದ್ದಾರೆ ಎನ್ನುವುದು ನಮ್ಮ ಮುಂದೆ ಇದೆ ಎಂದ ಸಂಸದ ಕಾಗೇರಿ, ಜಗತ್ತಿನ ಚಿತ್ರಣ ನಮ್ಮ ಕಣ್ಣ ಮುಂದೆ ಇದೆ. ಜಗತ್ತಿನ ಎದುರುಗಡೆ ಸವಾಲಿನ ಸಂದರ್ಭ ಉಂಟಾಗಿದೆ. ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಆಗಿದೆ.
ಆದರೂ ದೇಶದಲ್ಲಿ ಜನರು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರ. ದೇಶಕ್ಕೆ ಗ್ಯಾಸ್, ಕ್ರೂಡ್ ಆಯಿಲ್ ಬರುವುದು ನಿಂತಿಲ್ಲ. ಈ ಸನ್ನಿವೇಶದಲ್ಲಿ ಪ್ರಧಾನಿ ಅವರು ನಿಯಂತ್ರಣ ಮಿತಿಯ ಮಾತು ಹೇಳಿದ್ದಾರೆಂದರೆ, ಅದನ್ನ ನಾವು ಪಾಲಿಸಬೇಕಾಗಿದೆ. ನಾವು ಕ್ರೂಡ್ ಆಯಿಲ್, ಪೆಟ್ರೋಲ್, ರಸಗೊಬ್ಬರ ಸೇರಿದಂತೆ ಅನೇಕ ವಸ್ತು ವಿದೇಶಕ್ಕೆ ಅವಲಂಬಿತರಾಗಿದ್ದೇವೆ. ಇದರ ಮಿತ ಬಳಕೆಯಿಂದ ಮುಂದೆ ಆಗುಬಹುದಾದ ಸಮಸ್ಯೆ ತಡೆಯಲು ಪ್ರಧಾನಿ ಹೇಳಿದನ್ನ ನಾವು ಪಾಲಿಸಬೇಕಾಗಿದೆ ಎಂದು ಸಂಸದ ಕಾಗೇರಿ ನುಡಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 