ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಸಾಸನೂರರಿಂದ ಚಾಲನೆ
ಲೋಕದರ್ಶನ
ವರದಿ
ತಾಳಿಕೋಟೆ ತಾಲೂಕಿನ ನಾವದಗಿ 19 -ಕೊಳಿಹಾಳ ತಾಲೂಕು ಸರಹದ್ದಿನ ರಸ್ತೆ ಡಾಂಬರೀಕರಣ ಕಾಮಗಾರಿಗೆ ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರು ಬುಧವಾರರಂದು ಭೂಮಿಪೂಜೆ
ನೆರವೇರಿಸಿ ಚಾಲನೆ ನೀಡಿದರು.
ಈ ಸಮಯದಲ್ಲಿ ಮಾತನಾಡಿದ
ಶಾಸಕ ಸಾಸನೂರ ಅವರು ಬಹಳದಿನಗಳಿಂದ ದುರಸ್ಥಿ
ಕಾಣದೇ ನೆನೆಗುದಿಗೆಗೆ ಬಿದ್ದಿದ್ದ ನಾವದಗಿ-ಕೊಳಿಹಾಳ(ತಾಲೂಕಾಸರಹದ್ದಿ)ನ ರಸ್ತೆಯನ್ನು ಜಿಲ್ಲಾ
ಪಂಚಾಯತ್ ವಿಜಯಪುರ 2017-18 ನೇ ಸಾಲಿನ ನಬಾರ್ಡ(ಆರ್ಐಡಿಎಫ್-23) ಯೋಜನೆಯಡಿ 80 ಲಕ್ಷ ರೂ. ವೆಚ್ಚದಲ್ಲಿ
ಸುಮಾರು 2.50 ಕೀಲೋಮೀಟರ್ ರಸ್ತೆ ಸುಧಾರಣೆ ಕೈಗೊಳ್ಳಲಾಗುತ್ತಿದೆ ಈ ಕಾಮಗಾರಿಯನ್ನು ಅಚ್ಚುಕಟ್ಟಾಗಿ
ನಿರ್ವಹಿಸಿ ಕೊಡಲು ಗುತ್ತಿಗೆದಾರರಿಗೆ ಸಂಬಂದಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಈ ಸಮಯದಲ್ಲಿ ಮುಖಂಡರುಗಳಾದ
ಭೀಮನಗೌಡ ನಾವದಗಿ, ರಾಜುಸೌಕಾರ ಇಬ್ರಾಂಪೂರ, ತಾ.ಪಂ.ಸದಸ್ಯ
ರಾಜುಗೌಡ ಕೊಳೂರ, ಸಿದ್ದನಗೌಡ ಕಾರಗನೂರ, ಪ್ರಶಾಂತ ಹಾವರಗಿ, ಸುಭಾಸ ಗುಂಡಕನಾಳ, ಭೀಮನಗೌಡ ಇಬ್ರಾಹಿಂಪೂರ, ನಿಂಗಣ್ಣ ದೇಸಾಯಿ, ಬಸಣ್ಣ ಇಬ್ರಾಂಪೂರ, ಬಸನಗೌಡ ಪಾಟೀಲ(ಲಕ್ಕುಂಡಿ), ಸಿದ್ದನಗೌಡ ಬಿರಾದಾರ, ಗುತ್ತಿಗೆದಾರ ದೇಶಮುಖ ಮೊದಲಾದವರು ಇದ್ದರು.
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ 